ಮಾ.1 ರಿಂದ ಮಾ.7 ರವರೆಗೆ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ

0

ಮಾ.3ರಂದು ಸುಳ್ಯದಿಂದ ಹೊರೆಕಾಣಿಕೆ ಸಮರ್ಪಣೆ


ಪಾಟಾಳಿ ಯಾನೆ ಗಾಣಿಗ ಸಮಾಜದವರ ಪತ್ರಿಕಾಗೋಷ್ಠಿ

ಕಾಸರಗೋಡು ಜಿಲ್ಲೆಯ ಕುಂಬಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವವು ಮಾ.1 ರಿಂದ ಮಾ.7ರ ತನಕ ನಡೆಯಲಿದ್ದು, ಆ ಪ್ರಯುಕ್ತ ಮಾ.3ರಂದು ಸುಳ್ಯದಿಂದ ಪೆರ್ಣೆ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆಯು ನಡೆಯುವುದು. ಇದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಾಲೂಕು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಹೇಳಿದರು.


ಫೆ.16ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ನಮ್ಮ ಸಮಾಜದ ಕುಲದೇವತೆಯಾಗಿರುವ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಡೆದು 20 ವರ್ಷಗಳು ಕಳೆದಿದೆ. ಇದೀಗ ಮಾರ್ಚ್ ತಿಂಗಳ 1 ರಿಂದ 7 ರವರೆಗೆ ಕಾರ್ಯಕ್ರಮ ನಡೆಯುವುದು. ಮಾ.1ರಂದು ಉಗ್ರಾಣ ತುಂಬಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುವುದು. ಬಳಿಕ ಉತ್ಸವಗಳು ನಡೆಯುವುದು. ಮಾ.3ರಂದು ಬೀರ್ಣಾಳ್ವ ದಯವದ ನರ್ತನ ಸೇವೆ ನಡೆದು ಪ್ರಸಾದ ವಿತರಣೆ ಆಗುವುದು. ಮಾ.4, 5 ಹಾಗೂ 6ರಂದು ಕೂಡಾ ದೇವರ ಕಾಯ ನಡೆದು, ಮಾ.೭ರಂದು ಶ್ರೀ ಮುಚ್ಚಿಲೋಟ್ ಭಗವತೀ ಅಮ್ಮನವರ ಸಿರಿಮುಡಿ ದರ್ಶನ ಪುಲ್ಲೂರ್ ಕಾಳಿ ದೂವದೊಂದಿಗೆ ಭೇಟಿ, ಪ್ರಸಾದ ವಿತರಣೆ ನಡೆಯುವುದು ಎಂದವರು ವಿವರ ನೀಡಿದರು.


ಮಾ.3ರಂದು ಸುಳ್ಯದಿಂದ ಹಸಿರುವಾಣಿ


ಮಾ.3ರಂದು ನಮ್ಮ ಸಮಾಜದ ಎಲ್ಲರೂ ಸೇರಿಕೊಂಡು ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಮಾಡಲಿzವೆ. ಆ ದಿನ ಬೆಳಗ್ಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರಿನಿಂದ ವಾಹನ ಮೆರವಣಿಗೆ ಆರಂಭಗೊಳ್ಳುವುದು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕರು ಚಾಲನೆ ನೀಡುವರು. ಅಲ್ಲದೆ ಕಾರ್ಯಕ್ರಮಕ್ಕೂ ಮೊದಲು ಸುಳ್ಯದಿಂದ ಪೆರ್ಣೆಗೆ ಹೋಗಿ ಶ್ರಮ ಸೇವೆಯಲ್ಲಿ ಪಾಲು ಪಡೆಯಲಿzವೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಹಸಿರುವಾಣಿ ಸಮರ್ಪಣಾ ಸಮಿತಿಯ ಗೌರವ ಸಂಚಾಲಕ ಕಿರಣ್ ಬಿಳಿಯಾರು, ಸಂಚಾಲಕ ಬಾಲಚಂದ್ರ ಅಡ್ಕಾರು, ಸಹ ಸಂಚಾಲಕ ಪ್ರದೀಪ್ ಪೆರಾಜೆ, ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಕರಣಿಕರು / ಲೆಕ್ಕಪಾಲರಾದ ಚಂದ ಪಾಟಾಳಿ ಕುಡೆಕಲ್ಲು, ಪ್ರಮುಖರಾದ ಮಹಾಲಿಂಗನ್ ಬಾಜಿರ್ ತೊಟ್ಟಿ, ತಾಲೂಕು ಸಮಿತಿಯ ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ತಾಲೂಕು ಸಮಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಖಜಾಂಚಿ ವಿಜಯ ಎರ್ಮೆಟ್ಟಿ, ಜತೆ ಕಾರ್ಯದರ್ಶಿ ಸೌಮ್ಯ ರಮೇಶ್, ಮಹಿಳಾ ಸಮಿತಿ ಸಂಚಾಲಕಿ ಪ್ರೇಮಾ ಚಂದ ಕುಡೆಕಲ್ಲು, ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಸುಳ್ಯದ ಹಸಿರುವಾಣಿ ಪ್ರತಿನಿಧಿ ನಾರಾಯಣ ಎಸ್.ಎಂ., ನಿರ್ದೇಶಕರಾದ ರಾಧಾಕೃಷ್ಣ ಬೇರ್ಪಡ್ಕ
ಇದ್ದರು.