ವಿಜೃಂಭಣೆಯಿಂದ ನಡೆದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ

0

ಶ್ರೀ ದೇವರ ವೈಭವದ ಕಟ್ಟೆಪೂಜೆ – ಅತ್ಯಾಕರ್ಷಕ ಸಿಡಿಮದ್ದು ಪ್ರದರ್ಶನ

ಇಂದು ಬೆಳಿಗ್ಗೆ ರಾಜಾಂಗಣ ಪ್ರಸಾದ,ಬಟ್ಟಲು ಕಾಣಿಕೆ

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಫೆ.16 ರಂದು ಬೆಳಿಗ್ಗೆ ಗಣಪತಿ ಹವನ,ಉಷಾ:ಪೂಜೆ ನಡೆಯಿತು. ಬೆಳಿಗ್ಗೆ ಶಿವೇಲಿ,ನವಕ ಕಲಶಾಭಿಷೇಕ ನಡೆಯಿತು.


ಮಧ್ಯಾಹ್ನ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಿತು. ಸಂಜೆ ಶ್ರೀ ಭೂತಬಲಿ,ಸೇವೆ ಸುತ್ತು,ಪೇಟೆ ಸವಾರಿ,ಸಿಡಿಮದ್ದು ಪ್ರದರ್ಶನ ನಡೆಯಿತು.
ರಾತ್ರಿ ರಾತ್ರಿ ಪೂಜೆ,ಶಯನ,ಕವಾಟಬಂಧನ ನಡೆಯಿತು. ಶ್ರೀ ದೇವರ ಪೇಟೆ ಸವಾರಿ ಸಂದರ್ಭದಲ್ಲಿ ಅಲ್ಲಲ್ಲಿ ಕಟ್ಟೆಗಳನ್ನು ಸುಂದರವಾಗಿ ಹೂ ಹಾಗೂ ವಿದ್ಯುತ್ದೀ ಪಗಳು,ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು.

ಸಿಡಿಮದ್ದಿನ ಪ್ರದರ್ಶನ ಅತ್ಯಾಕರ್ಷಕವಾಗಿತ್ತು. ಕಟ್ಟೆ ಪೂಜೆ ನಡೆಯುವಲ್ಲಿ ಭಕ್ತಾದಿಗಳಿಗೆ ಪಾನಕ,ಅವಲಕ್ಕಿ,ಪಲವು,ಜ್ಯೂಸ್ ವ್ಯವಸ್ಥೆ ಮಾಡಲಾಗಿತ್ತು.
ರಸ್ತೆಯುದ್ದಕ್ಕೂ ದೀಪಗಳಿಂದ ಅಲಂಕರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೇಟೆ ಸವಾರಿಯಲ್ಲಿ ಪಾಲ್ಗೊಂಡಿದ್ದರು. ಭಜನಾ ಕಾರ್ಯಕ್ರಮ ಮತ್ತಷ್ಟು ಮೆರುಗು ನೀಡಿತ್ತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸದಸ್ಯರಾದ ಅರ್ಚಕ ಉದಯಕುಮಾರ ಕೆ.ಟಿ, ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಉದಯಪ್ರಸಾದ್ ಅಜಪಿಲ, ಶಮಿತಾ ಪಿ.ರೈ ಪನ್ನೆ, ನವಪ್ರಭಾ ತಂಬಿನಮಕ್ಕಿ, ರಾಧಾಕೃಷ್ಣ ಕುಲಾಲ್, ಚಂದ್ರಕಾಂತ ಗೌರಿಹೊಳೆ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

ಫೆ.17 ರಂದು ಬೆಳಿಗ್ಗೆ ಕವಾಟೋದ್ಘಾಟನೆ,ತೈಲಾಭ್ಯಂಜನ ನಡೆಯಿತು. ನಂತರ ಉಷಾಪೂಜೆ,ಆರಾಟು ಬಲಿ, ಅವಭೃತ ಸ್ನಾನ ,ದರ್ಶನ ಬಲಿ ನಡೆಯಲಿದೆ.
ಮಧ್ಯಾಹ್ನ ರಾಜಾಂಗಣ ಪ್ರಸಾದ,ಬಟ್ಟಲುಕಾಣಿಕೆ,ಧ್ವಜ ಅವರೋಹಣ,ಸಂಪ್ರೋಕ್ಷಣೆ,ಮಹಾಪೂಜೆ,ಮಂತ್ರಾಕ್ಷತೆ,ಭಕ್ತಾದಿಗಳಿಗೆ ಅನ್ನಪ್ರಸಾದ ನಡೆಯಲಿದೆ.
ರಾತ್ರಿ ಅಗ್ನಿಗುಳಿಗ ದೈವದ ಭಂಡಾರ ತೆಗೆಯಲಾಗುವುದು. ನಂತರ ಭೂತಕೋಲ,ಬಟ್ಟಲುಕಾಣಿಕೆ ನಡೆಯಲಿದೆ.