ಸುಳ್ಯ ಮಂಡಲ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಗಳಾಗಿ ವಿನಯ ಕಂದಡ್ಕ ಹಾಗೂ ಪ್ರದೀಪ್ ರೈ ಮನವಳಿಕೆ ಕೋಶಾಧಿಕಾರಿಯಾಗಿ ಸುಭೋದ್ ಶೆಟ್ಟಿ ಮೇನಾಲ ನೇಮಕ

0

ಸುಳ್ಯ ಮಂಡಲ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿಗಳಾಗಿ ಪ್ರದೀಪ್ ರೈ ಮನವಳಿಕೆ ಮತ್ತು ವಿನಯ ಕುಮಾರ್ ಕಂದಡ್ಕ ನೇಮಕಗೊಂಡಿದ್ದಾರೆ.

ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರ ಉಪಸ್ಥಿತಿಯಲ್ಲಿ ಇಂದು ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ನಡೆದ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಈ ಘೋಷಣೆ ಮಾಡಿದರು.


ಉಪಾಧ್ಯಕ್ಷರುಗಳಾಗಿ
ಶುಭದ ಎಸ್. ರೈ, ರಮೇಶ್ ಕಲ್ಪುರೆ, ಭಾಸ್ಕರ್ ಗೌಡ ಇಚ್ಲಂಪಾಡಿ, ಶ್ರೀನಾಥ್ ರೈ ಬಾಳಿಲ, ರಾಮಕೃಷ್ಣ ಭಟ್ ಬೆಳ್ಳಾರೆ, ಶಿವಾನಂದ ಕುಕ್ಕುಂಬಳ, ಕೋಶಾಧಿಕಾರಿಯಾಗಿ ಸುಭೋದ್ ಶೆಟ್ಟಿ ಮೇನಾಲ, ಕಾರ್ಯದರ್ಶಿಗಳಾಗಿ ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಶಿವಪ್ರಸಾದ್ ನಡುತೋಟ ,
ಗಣೇಶ್ ಉದನಡ್ಕ, ಜಯರಾಜ್ ಕುಕ್ಕೇಟಿ, ಶಂಕರಲಿಂಗಂ, ಯಶೋಧ ಬಾಳೆಗುಡ್ಡೆ ನೇಮಕಗೊಂಡಿದ್ದಾರೆ.