ವಿದುಷಿ ಶ್ರೀಮತಿ ಕಾವ್ಯಶ್ರೀ ಕಪಿಲ್‌ರವರಿಗೆ ಜ್ಞಾನ ಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ

0

ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಮಾ.29ರಂದು ಬೆಂಗಳೂರು ಬಾಗಲಗುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ವಿಶ್ವ ಕನ್ನಡ ಪ್ರಥಮ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಕಾವ್ಯಶ್ರೀ ಕಪಿಲ್‌ರವರಿಗೆ ಜ್ಞಾನ ಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಒಟ್ಟು 29 ಮಂದಿ ಮಹಿಳಾ ಸಾಧಕಿಯರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಿದುಷಿ ಕಾವ್ಯಶ್ರೀ ಕಪಿಲ್ ರವರು ಕಳೆದ ಹಲವು ವರ್ಷಗಳಿಂದ ಮಡಿಕೇರಿಯಲ್ಲಿ
ಕಲಾಕಾವ್ಯ ನಾಟ್ಯ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಇವರು ನಿವೃತ್ತ ASI ನಾರಾಯಣ ಚಿದ್ಗಲ್ , ಮಡಪ್ಪಾಡಿ ಮತ್ತು ಶಶಿಪ್ರಭ ದಂಪತಿಯ ಪುತ್ರಿ.

ವಿವಾಹವಾದ ಬಳಿಕ ಕುಟುಂಬದೊಂದಿಗೆ ಮಡಿಕೇರಿಯಲ್ಲಿ ನೆಲೆಸಿದ್ದಾರೆ.