ಅರಂತೋಡು: ಉಳುವಾರು ಕುಟುಂಬಸ್ಥರ ತರುವಾಡು ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲ

0

ಅರಂತೋಡು ಗ್ರಾಮದ ಉಳುವಾರು ಕುಟುಂಬಸ್ಥರ ತರುವಾಡು ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲವು ಮಾ.29 ಹಾಗೂ 30ರಂದು ನಡೆಯಿತು.

ಮಾ.29ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆದು, ಕುಳ್ಚಾಟ ನಡೆಯಿತು. ಮಾ.30ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲ ನಡೆಯಿತು.
ಈ ಸಂದರ್ಭದಲ್ಲಿ ಉಳುವಾರು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.