ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಬೂಡು – ಬೆಳ್ಳಾರೆ

0

ಲೆಕ್ಕಪತ್ರ ಮಂಡನೆ, ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಪ್ರಸಾದ್ ಬೀಡು,ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಬೀಡು

ಬೆಳ್ಳಾರೆ ಬೂಡು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿಯ ಪ್ರತಿಷ್ಠೇ ಹಾಗೂ ನೇಮೊತ್ಸವವು ಇತ್ತೀಚೆಗೆ ನಡೆದಿದ್ದು ಮಾ.31 ರಂದು ಲೆಕ್ಕಪತ್ರ ಮಂಡನೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.


ಸಭಾಧ್ಯಕ್ಷತೆಯನ್ನು ಸುಂದರ ತೊಡಿಕಾನ ವಹಿಸಿಕೊಂಡಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಆರ್ ಕೆ ಭಟ್ ಕುರುಂಬುಡೇಲು, ಅಣ್ಣು ಪುಡ್ಕಜೆ ಗಣೇಶ್ ಪಾಟಾಜೆ , ಪ್ರಸಾದ್ ಬೀಡು, ಕರಿಯ ಬೀಡು, ಚಂದ್ರಶೇಖರ ಪೆರಾಜೆ, ಜನಾರ್ದನ ಕಲ್ಲೋಣಿ ,ಹರೀಶ್ ದರ್ಖಾಸ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೆಕ್ಕಪತ್ರ ಮಂಡನೆಯ ನಂತರ ಗಣ್ಯರ ಉಪಸ್ಥಿತಿಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪ್ರಸಾದ್ ಬೀಡು, ಉಪಾಧ್ಯಕ್ಷರಾಗಿ ಗಣೇಶ್ ಪಳ್ಳಿಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಬೀಡು, ಉಪಕಾರ್ಯದರ್ಶಿಯಾಗಿ ವಿಶ್ವನಾಥ ಬೀಡು, ಖಜಾಂಜಿಯಾಗಿ ದಿನೇಶ್ ಬೀಡು, ಉಪಖಜಾಂಜಿಯಾಗಿ ಚಂದ್ರಶೇಖರ ಪೆರಾಜೆ ಇವರನ್ನು ಆಯ್ಕೆ ಮಾಡಲಾಯಿತು.
ವಿಜಯ್ ಪಾಟಾಜೆ ಸ್ವಾಗತಿಸಿ,ವಂದಿಸಿದರು.