SMA ಬೆಳ್ಳಾರೆ ಝೋನಲ್ ವತಿಯಿಂದ ಬೃಹತ್ ಆತ್ಮೀಯ ದುಆವ ಮಜ್ಲಿಸ್

0

ಕರುವೇಲ್ ಸಾದಾತ್ ತಂಙಳ್ ಹಾಗೂ ಫಾತಿಮತ್ ರಫಾ ಬೆಳ್ಳಾರೆ ಅನುಸ್ಮರಣೆ ಕಾರ್ಯಕ್ರಮ

ಎಸ್ ಎಂ ಎ ಬೆಳ್ಳಾರೆ ಝೋನಲ್ ವತಿಯಿಂದ ಇತ್ತೀಚಿಗೆ ಅಗಲಿದ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದ.ಕ ಜಿಲ್ಲಾಧ್ಯಕ್ಷರಾಗಿದ್ದ ಮರ್ಹೂಂ ಸಯ್ಯದ್ ಕರುವೇಲ್ ಸಾದತ್ ತಂಙಳ್ ಹಾಗೂ ಬೆಳ್ಳಾರೆ ಪಾಲ್ತಡ್ ನಿವಾಸಿ ಮರ್ಹೂಂ ಫಾತಿಮತ್ ರಫಾ ಮತ್ತು ಅಗಲಿದ ಸುನ್ನಿ ಕುಟುಂಬದ ಸರ್ವರ ಹೆಸರಿನಲ್ಲಿ ತಹಲೀಲ್ ಮತ್ತು ಅನುಸ್ಮರಣೆ ಕಾರ್ಯಕ್ರಮ ರಂಜಾನ್ 29 ರಂದು ರಾತ್ರಿ ಪಳ್ಳಿಮಜಲು ಅಬೂಭಕ್ಕರ್ ಸಿದ್ದೀಕ್ ಮಸೀದಿಯಲ್ಲಿ ನಡೆಯಿತು.


ಎಸ್ ಎಂ ಎ ಬೆಳ್ಳಾರೆ ಝೋನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹಸನಿ ಉಸ್ತಾದ್ ದುವಾ ಮಜ್ಲಿಸ್ ಕಾರ್ಯಕ್ರಮ ನೇತ್ರತ್ವವನ್ನು ವಹಿಸಿ ಅನುಸ್ಮರಣಾ ಮಾತುಗಳನ್ನಾಡಿದರು.
ಅಬೂಭಕ್ಕರ್ ಸಿದ್ದೀಕ್ ಜುಮ್ಮಾ ಮಸೀದಿ ಖತೀಬರಾದ ರಫೀಕ್ ಬಾಹಸನಿ,ಮಹಮೂದ್ ಸಖಾಫಿ,ಶುಭ ಹಾರೈಸಿದರು.
ಮೆಹಮೂದ್ ಹಾಜಿ ಬೆಳ್ಳಾರೆ,
ಎಸ್ ಎಂ ಎ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್‌ ಲತೀಫ್ ಹರ್ಲಡ್ಕ,ಬೆಳ್ಳಾರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ಬೀಡು, ಉಪಾಧ್ಯಕ್ಷ ಹನೀಫ್ ಹಾಜಿ ಇಂದ್ರಾಜೆ,ಸಂಶುದ್ದೀನ್ ಝಂ ಝಂ ,ಹನೀಫ್ ನಜಾತ್,ಪತ್ರಕರ್ತ ಶರೀಫ್ ಜಟ್ಟಿಪಳ್ಳ, ರವೂಪ್ ಪಾಲ್ತಡ್
ಮೊದಲಾದವರು ಉಪಸ್ಥಿತರಿದ್ದರು