ಕಾಯರ್ತೋಡಿ ಶ್ರೀ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಇಂದು ಗುರುಪೂಜೆ – ನವಕಾಭಿಷೇಕ

ಕಾಯರ್ತೋಡಿಯ ವಿಷ್ಣುಸರ್ಕಲ್ ಬಳಿಯಿರುವ ಶ್ರೀ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ 20ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಎ.11 ಪ್ರಾರಂಭಗೊಂಡಿದ್ದು, ಇಂದು ಗುರುಪೂಜೆ, ನವಕಾಭಿಷೇಕ , ಮಹಾಪೂಜೆ ಜರುಗಲಿದೆ.

ಎ.11ರಂದು ಸಂಜೆಯಿಂದ ರಾತ್ರಿಯವರೆಗೆ ನಾಮಾರ್ಚನೆ – ಭಜನೆ, ಬಳಿಕ ದೀಪಾರಾಧನೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಅನ್ನಸಂತರ್ಪಣೆ ಜರುಗಿತು.