ಪೆರುವಾಜೆ ಕಾಂಗ್ರೆಸ್ ಕಾರ್ಯಕರ್ತರಿಂದ ಮನೆ ಮನೆ ಭೇಟಿ ಮತ ಯಾಚನೆ

0

ಪೆರುವಾಜೆ ಗ್ರಾಮದ ವಾರ್ಡ್ 76 ಮತ್ತು 77 ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಅವರ ಪರ ಮತಯಾಚನೆಗೆ ಮನೆ ಮನೆ ಬೇಟಿ ಕಾರ್ಯವನ್ನು ಜಂಟಿಯಾಗಿ ನಡೆಸುತ್ತಿದ್ದಾರೆ.


ಮತ ಯಾಚನೆಯಲ್ಲಿ ಗ್ರಾಮ ಪಂಚಾಯತ್ವ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ನಾರ್ಕೋಡು, ಪಂಚಾಯಿತಿ ಉಪಾಧ್ಯಕ್ಷೆ ಶಹನಾಜ್, ಬೂತ್ ಅಧ್ಯಕ್ಷ ರಾದ ಇಬ್ರಾಹಿಂ ಅಂಬಟೆ ಗದ್ದೆ, ಲಕ್ಷ್ಮಣ ದುರ್ಗಾ ನಗರ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕರುಣಾಕರ,ವಿಜಯ ದುರ್ಗಾ ನಗರ, ಸುನಿಲ್ ಪೂಜಾರಿ,ಹುಕ್ರಪ್ಪ, ಬಾಬು, ಇಬ್ರಾಹಿಂ ಸಾರಕೆರೆ ಮತ್ತಿತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ಯೋಜನೆ ಪಡೆದಿರುವ ಜನತೆಯಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಜನತೆ ಕಾಂಗ್ರೆಸ್ ಬೆಂಬಲಿಸುವ ಭರವಸೆಯನ್ನು ಮನೆ ಮನೆ ಭೇಟಿಯಲ್ಲಿ ವ್ಯಕ್ತ ಪಡಿಸಿದ್ದಾರೆ ಎಂದು ಸಚಿನ್ ತಿಳಿಸಿದ್ದಾರೆ.