ಪಿ.ಡಿ.ಓ. ಲೀಲಾವತಿಯವರ ನಿವೃತ್ತಿ ಕಾರ್ಯಕ್ರಮ

0

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಶ್ರೀಮತಿ ಲೀಲಾವತಿ ಎಂ.ರವರ ನಿವೃತ್ತಿ ಕಾರ್ಯಕ್ರಮ ವು ಸುಳ್ಯದ ಗಿರಿದರ್ಶಿನಿ ಸಭಾಭವನ ಅಂಬಟೆಡ್ಕದಲ್ಲಿ ಮೇ.3ರಂದು ನಡೆಯಿತು.

ಈ ಸಂದರ್ಭದಲ್ಲಿ ಲೀಲಾವತಿ ಎಂ.ರವರ ಪತಿ ವೆಂಕಟೇಶ್ ಸಿ.ಎ., ಪುತ್ರಿ ಸಂಹಿತಾ, ಸಂಜೀತ್, ಸಂಗೀತಾ, ಸಂಚಿತಾ ಹಾಗೂ ಅಳಿಯ ಗಿರಿಪ್ರಸಾದ್ ರವರು ಕೇಕ್ ಕಟ್ ಮಾಡಿದರು.

ಮನೆಯವರ ಪರವಾಗಿ ಹಿರಿಯರಾದ ಪದ್ಮನಾಭ ಕುರುಂಜಿ, ಉಳುವಾರು ಹೇಮಾವತಿ, ಮಿತ್ತಮೂಲೆ ಪೂವಕ್ಕರವರು ಲೀಲಾವತಿ ದಂಪತಿಗಳನ್ನು ಸನ್ಮಾನಿಸಿದರು.

ಕಾರ್ಯಕ್ರಮದ ಮಧ್ಯೆ ಯುವ ಕಲಾವಿದ ಅಶ್ವಿತ್ ಆತ್ರೇಯ ರವರಿಂದ ವಿವಿಧ ಕಾರ್ಯಕ್ರಮಗಳು ಮೂಡಿಬಂತು.

ತೀರ್ಥರಾಮ, ಪದ್ಮನಾಭ, ನಾರಾಯಣ ನಾಯ್ಕ ರವರು ಲೀಲಾವತಿ ಯವರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಪ್ರದೀಪ್ ಮುರುಳ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹರೀಶ್ ಉಬರಡ್ಕ, ಸುಂದರ ಕೇನಾಜೆ, ಧನಂಜಯ ಕೋಟೆಮಲೆ ಮತ್ತಿತರರಿದ್ದರು.