ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಒಳಾಂಗಣ ನಿರ್ಮಾಣಕ್ಕೆ ಸಜ್ಜನ ಪ್ರತಿಷ್ಠಾನದ ದೇಣಿಗೆ

0

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಒಳಾಂಗಣ ಸಭಾಂಗಣ ನಿರ್ಮಾಣಕ್ಕೆ ಸಂಪಾಜೆ ಗ್ರಾಮ ಗೂನಡ್ಕದ ಸಜ್ಜನ ಪ್ರತಿಷ್ಠಾನ ವತಿಯಿಂದ ಈ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಆಗಿರುವ ಡಾ. ಉಮ್ಮರ್ ಬೀಜದಕಟ್ಟೆ ಯವರು 50 ಸಾವಿರ ದೇಣಿಗೆಯನ್ನು ಕಾಲೇಜಿನ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಏ.ಕೆ ಜತ್ತಪ್ಪ ಸಂಚಾಲಕರಾದ ಕೆ. ಆರ್. ಗಂಗಾಧರ್ ನಿರ್ದೇಶಕರಾದ ಎ. ಸಿ. ವಸಂತ ಮತ್ತು ಯು. ಎಂ. ಶೇಷಗಿರಿ ಹಾಗೂ ಸಜ್ಜನ ಪ್ರತಿಷ್ಠಾನ ವತಿಯಿಂದ ಶ್ರೀ ಮಹಮ್ಮದ್ ಶರೀಫ್ ಜಟ್ಟಿಪಳ್ಳ ಮತ್ತು ಉನೈಸ್ ಗೂನಡ್ಕ ಉಪಸ್ಥಿತರಿದ್ದರು.