ಬಳ್ಪ ಹಾಗೂ ಕೇನ್ಯ ಗ್ರಾಮದ ಬಿಜೆಪಿ ಕಾರ್ಯಕರ್ತರಿಗೆ – ಮತದಾರರಿಗೆ ಅಭಿನಂದನಾ ಸಭೆ ಕಾರ್ಯಕ್ರಮ

0

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಹಿನ್ನಲೆಯಲ್ಲಿ ಬಳ್ಪ – ಕೇನ್ಯ ಗ್ರಾಮವನ್ನೊಳಗೊಂಡ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಸಿ.ಎ ಬ್ಯಾಂಕ್ ಆದರ್ಶವರ್ಷಿಣಿ ಸಭಾಭವನ ಬೀದಿಗುಡ್ಡೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿದರು. ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆಗೊಂಡ ಭಾಗೀರಥಿ ಮುರುಳ್ಯರಿಗೆ ಬಿಜೆಪಿ ಶಕ್ತಿಕೇಂದ್ರದ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ನಂತರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಶಾಸಕಿಯವರು ಹೇಳಿದರು. ಬಳ್ಪ ಗ್ರಾಮದಲ್ಲಿ ಸಂಸದರ ಆದರ್ಶ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದೆ. ಮುಂದೆಯೂ ನರೇಂದ್ರ ಮೋದಿಯವರ ಅಭಿವೃದ್ಧಿಯ ಮಾರ್ಗದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹರೀಶ್ ಕಂಜಿಪಿಲಿ, ಎ.ವಿ ತೀರ್ಥರಾಮ, ಸುಬ್ರಹ್ಮಣ್ಯ ಕುಳ, ಭಾಸ್ಕರ ಗೌಡ ಪಂಡಿ, ಶೂರಪ್ಪ ಗೌಡ ಪಂಡಿ, ಪ್ರಕಾಶ್, ಸದಾನಂದ ಕಾರ್ಜ, ತಾರಾ ರೈ, ರಮಾನಂದ, ವಿನೋದ್ ಬೊಳ್ಮಲೆ, ಬೆಳ್ಯಪ್ಪ, ಹೊನ್ನಪ್ಪ ಗೌಡ, ಕಿಟ್ಟಣ ಪೂಜಾರಿ, ಹರ್ಷಿತ್ ಕಾರ್ಜ, ಹರೀಶ್ ಕಾರ್ಜ, ದೇವರಾಜ್, ಸುಂದರ ಗೌಡ ಕೇನ್ಯ, ವಾಸುದೇವ ಕೆರೆಕ್ಕೋಡಿ, ಕಿರಣ್ ಕೋನಡ್ಕ, ಗಗನ್ ಕಟ್ರಮನೆ, ಬಾಲಕೃಷ್ಣ ರೈ ಬೆರ್ಕಿ, ಕಾರ್ತಿಕ್ ಕಣ್ಕಲ್, ಚಿದಾನಂದ ಕಲ್ಲೇರಿ, ಶಶಿಧರ ಪನ, ಅಭಿಲಾಷ್ ಕಟ್ಟ, ರಾಜೀವ್ ಕಣ್ಕಲ್, ಕುಶಾಲಪ್ಪ ಗೌಡ ಪಂಡಿ, ಲೋಕೇಶ್ ಕಟ್ಟ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.