
ಸುಳ್ಯ ಜಯನಗರ – ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ, ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನ ಇಲ್ಲಿ ವ್ಯವಸ್ಥಾಪನಾ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ ಇದರ ನೇತೃತ್ವದಲ್ಲಿ ದೈವಗಳ ಕಾಲಾವಧಿ ನೇಮೋತ್ಸವವು ಎ.೫ ಮತ್ತು ಎ.೬ರಂದು ನಡೆಯಿತು.
ಎ.೫ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ ೪ ರಿಂದ ಶ್ರೀ ಗುಳಿಗ ದೈವದ ನೇಮ, ಬಳಿಕ ಪ್ರಸಾದ ವಿತರಣೆ. ಸಂಜೆ ದೀಪಾರಾಧನೆ ನಡೆಯಿತು.
ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ. ಬಳಿಕ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು ಸತ್ಯದೇವತೆ ಶ್ರೀ ತನ್ನಿ ಮಾಣಿಗ ದೈವದ ನೇಮ. ರಾತ್ರಿ ಪಾತ್ರಿಗಳ ದರ್ಶನ ನಡೆಯಿತು.
ಎ.೬ರಂದು ಬೆಳಗ್ಗೆ ಪ್ರಸಾದ ವಿತರಣೆ. ಬೆಳಗ್ಗೆ ೬ ರಿಂದ ಕಾರಣಿಕ ದೈವ – ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.