ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಬದಲಾವಣೆ

0

ಅಧ್ಯಕ್ಷರಾಗಿ ಕೆಂಚಪ್ಪ ಗೌಡ, ಉಪಾಧ್ಯಕ್ಷರಾಗಿ ಶ್ರೀನಿವಾಸ್, ದೇವರಾಜು

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಬದಲಾವಣೆಯಾಗಿದ್ದು ನೂತನ ಅಧ್ಯಕ್ಷರಾಗಿ ಬಿ.ಕೆಂಚಪ್ಪ ಗೌಡ ಆಯ್ಕೆಯಾಗಿದ್ದಾರೆ. ಸಂಘದ 35 ನಿರ್ದೇಶಕರ ಸ್ಥಾನಕ್ಕೆ 2021 ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು.

ಅಧ್ಯಕ್ಷರಾಗಿ ಶ್ರವಣ ಬೆಳಗೋಳ ಶಾಸಕ ಸಿ.ಎನ್.ಬಾಲಕೃಷ್ಣ ಆಯ್ಕೆಯಾಗಿದ್ದರು. ಅವರ ವಿರುದ್ಧ ಕಳೆದ ಮೇ.೨೯ ರಂದು ೧೯ ಮಂದಿ ನಿರ್ದೇಶಕರು ಸಹಿ ಮಾಡಿ ಅವಿಶ್ವಾಸ ನಿರ್ಣಾಯದ ನೋಟಿಸ್ ನೀಡಿದ್ದರು.

ಬೈಲ ಪ್ರಕಾರ ಹತ್ತು ದಿನಗಳಲ್ಲಿ ಅಧ್ಯಕ್ಷರು ವಿಶ್ವಾಸ ಮತ ಸಾಬೀತು ಪಡಿಸಬೇಕಿತ್ತು. ಆದರೆ ಈ ಪ್ರಕ್ರಿಯೆ ನಡೆಯದಿದ್ದುದ್ದರಿಂದ ಚುನಾವಣೆ ನಿಗದಿಪಡಿಸಲಾಗಿತ್ತು. ಅದರಂತೆ ಜೂ.17 ರಂದು ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.

ಅಧ್ಯಕ್ಷರಾಗಿ ಬಿ. ಕೆಂಚಪ್ಪ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಲ್.ಶ್ರೀನಿವಾಸ್ ಮತ್ತು ಸಿ.ದೇವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಸಿ. ಜಯಮುತ್ತು, ಸಹಕಾರ್ಯದರ್ಶಿಯಾಗಿ ಜೆ.ಗಂಗಾಧರ್ ಮತ್ತು ಖಜಾಂಜಿಯಾಗಿ ಮಾರೇ ಗೌಡ ಚುನಾಯಿತರಾಗಿದ್ದಾರೆ. ಈ ಹಿಂದಿನ ಸಮಿತಿಯಲ್ಲಿ ಡಾ|ರೇಣುಕಾಪ್ರಸಾದ್‌ ಕೆ.ವಿ.ಯವರು ಉಪಾಧ್ಯಕ್ಷರಾಗಿದ್ದರು.