ಶಿಲ್ಪಾಚಾರಿ ಕಾಂತಮಂಗಲರಿಗೆ ಸನ್ಮಾನ

0

ಭಾರತೀಯ ಮಜ್ದೂರ್ ಸಂಘ ದ.ಕ ಇದರ ಮಂಗಳೂರಿನ ಕಾರ್ಯಾಲಯದಲ್ಲಿ ಜೂ.18 ರಂದು ನಡೆದ ಜಿಲ್ಲಾ ಕಾರ್ಯಕಾರಿಣಿಯಲ್ಲಿ
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ದ.ಕ ಜಿಲ್ಲಾ ನೂತನ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಶಿಲ್ಪಾಚಾರಿ ಅವರನ್ನು ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ತಾಲೂಕು ಸಮಿತಿಯ ವತಿಯಿಂದ ಸುಳ್ಯ ತಾಲೂಕು ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣ ಹಾಗೂ ಉಪಾಧ್ಯಕ್ಷರಾದ ಚಂದ್ರಶೇಖರ ಅರಂತೋಡು, ಪ್ರಧಾನ ಕಾರ್ಯದರ್ಶಿಯಾದ ಮಧುಸೂದನ, ಜೊತೆ ಕಾರ್ಯದರ್ಶಿಯಾದ ಮನೋಹರ, ಕೋಶಾಧಿಕಾರಿಯಾದ ಮೋನಪ್ಪ ಜಯನಗರ ಹಾಗೂ ಸದಸ್ಯರುಗಳಾದ ಶಿವಾನಂದ ಪಾಟೀಲ್, ಶಿಜು, ಭವಿತ್,ನವೀನ
ಹಾಗೂ ಕಾರ್ಯಾಲಯದ ಸಿಬ್ಬಂದಿ ರಶ್ಮಿ ಉಪಸ್ಥಿತರಿದ್ದರು.