ಕೇರ್ಪಡ ಕೂಡುಕಟ್ಟು ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಎಡಮಂಗಲ ಗ್ರಾಮದ ಕೇರ್ಪಡ ಕೂಡುಕಟ್ಟು ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಜೂನ್ ೧೯ರಂದು ಕಟ್ಟತ್ತಾರು ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ನೇತೃತ್ವದಲ್ಲಿ ನಡೆಯಿತು.


ಗಣಪತಿ ಹವನ, ಶುದ್ಧಿಕಲಶ, ತಂಬಿಲ ಸೇವೆ ನಡೆಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷ ಎಂಜೀರು ಪದ್ಮನಾಭ ರೈ, ಕಾರ್ಯದರ್ಶಿ ಸಾಯಿಪ್ರಸಾದ್ ಬೊಳ್ಕಜೆ, ಕೋಶಾಧಿಕಾರಿ ಅವಿನಾಶ್ ದೇವರಮಜಲು, ಪರಿಚಾರಕ ಚಂದ್ರಶೇಖರ ಬೊಳ್ಕಜೆ, ಸೀತಾರಾಮ ಗೌಡ ನಾಗನಕಜೆ, ಬಾಬು ಪೂಜಾರಿ ನೂಜಾಡಿ, ಗಂಗಾಧರ ಪಂಡಿತ್, ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ, ಜಯಂತ ನಾಗನಕಜೆ, ರಾಮಚಂದ್ರ ಕರಿಂಬಿಲ, ಸೀತಾರಾಮ ಗೌಡ ಪೂಜಾರಿಮನೆ, ಬಾಲಕೃಷ್ಣ ಗೌಡ ಕರಿಂಬಿಲ, ಶಿವಾನಂದ ನಾಗನಮಜಲು, ಇನ್ನಿತರರು ಉಪಸ್ಥಿತರಿದ್ದರು.