ದರ್ಖಾಸ್ತು : ಜಲಜೀವನ್ ಮಿಷನ್ ಯೋಜನೆಯಲ್ಲಿ ಪೈಪ್ ಅಳವಡಿಕೆ

0

ದರ್ಖಾಸ್ತು ಹಾಲು ಸೊಸೈಟಿ ಎದುರು ಕೆಸರು – ಸಂಚಾರಕ್ಕೆ ತೊಂದರೆ

ಜಲಜೀವನ್ ಮಿಷನ್ ಯೋಜನೆಯಲ್ಲಿ ದರ್ಖಾಸ್ತು ಸಮೀಪ ಕುಡಿಯುವ ನೀರಿನ ಪೈಪ್ ಅಳವಡಿಸಿದ್ದು ದರ್ಖಾಸ್ತು ಹಾಲು ಸೊಸೈಟಿ ಅಂಗಳದಲ್ಲಿ ಮಳೆಗೆ ಕೆಸರು ಬಂದು ನಿಂತಿದ್ದು ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ.


ರಸ್ತೆಯಲ್ಲಿ ಮಣ್ಣು ಅಗೆದು ಪೈಪ್ ಅಳವಡಿಸಿದ್ದು ಮಳೆಗೆ ಮಣ್ಣು ಕೊಚ್ಚಿಕೊಂಡು ಬಂದು ಹಾಲು ಸೊಸೈಟಿಯ ಬಾವಿಗೆ ಹಾಗೂ ಅಂಗಳದಲ್ಲಿ ಬಂದು ನಿಂತು ಕೆಸರುಮಯವಾಗಿದೆ.
ಬಾವಿ ನೀರು ಕೂಡ ಬಣ್ಣ ಬದಲಾಗಿದೆ.ನೀರು ಉಪಯೋಗಕ್ಕೆ ತೊಂದರೆಯಾಗಿದೆ.


ಅಂಗಳದಲ್ಲಿ ಕೆಸರು ನಿಂತ ಪರಿಣಾಮ ಹಾಲಿನ ವಾಹನ ಸಂಚಾರ ಹಾಗೂ ಡೈರಿಗೆ ಹಾಲು ತರುವವರಿಗೂ ತೊಂದರೆಯಾಗಿದ್ದು ಇದಕ್ಕೆ ಸಂಬಂದಪಟ್ಟವರು ಕೂಡಲೆ ಬಂದು ಮಣ್ಣು ತೆರವುಗೊಳಿಸಬೇಕು ಎಂದು ಸೊಸೈಟಿಯವರು ತಿಳಿಸಿದ್ದಾರೆ.