ಉಬರಡ್ಕ ಮಿತ್ತೂರು; ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

0


ಉಬರಡ್ಕ ಮಿತ್ತೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಜೂ.23ರಂದು ನಡೆಯಿತು.


ಮಾಜಿ ಶಾಸಕ ಎಸ್.ಅಂಗಾರ ಹಾಗೂ ಇಲಾಖಾ ಅನುದಾನದಲ್ಲಿ ಮಾಡಲಾದ ಉಬರಡ್ಕ- ನೀರಬಿದಿರೆ ರಸ್ತೆ ಕಾಂಕ್ರೀಟೀಕರಣ, ಉಬರಡ್ಕ- ಬೆಳರಂಪಾಡಿ ರಸ್ತೆ ಕಾಂಕ್ರೀಟೀಕರಣ, ದೇವಾಲಯ ರಸ್ತೆ, ಕಕ್ಕೆಬೆಟ್ಟು ರಸ್ತೆ ಕಾಂಕ್ರೀಟೀಕರಣ , ಮಾಯಿಲಮೂಲೆ ಮೋರಿ ರಚನೆ, ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವ ಎಸ್.ಅಂಗಾರ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಹಾಗೂ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಮತ್ತು ಮಾಜಿ ಸದಸ್ಯ ಶಶಿಧರ ನಾಯರ್ ರವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಸದಸ್ಯೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಪ್ರಮುಖರಾದ ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ ಮೇನಾಲ, ರಾಧಾಕೃಷ್ಣ ರೈ ಬೂಡು, ಶ್ಯಾಂ ಪಾನತ್ತಿಲ, ಅಪ್ಪಯ್ಯ ಸೂಂತೋಡು, ರಾಘವ ರಾವ್, ಆನಂದ ಮೋಂಟಡ್ಕ ಮೊದಲಾದವರು ಉಪಸ್ಥಿತರಿದ್ದರು.