ಬೂಡು ಕಾಲನಿಯ ದೈವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನಾ ಚಿಂತನೆ

0

ಸುಳ್ಯ ಕಸಬಾದ ಬೂಡು ಕಾಲನಿಯ ನಿವಾಸಿಗಳು ಆರಾಧನೆ ಮಾಡಿಕೊಂಡು ಬರುತ್ತಿರುವ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಕೇರಳದ ಜ್ಯೋತಿಷ್ಯರಾದ ವಿ.ಬಾಲಕೃಷ್ಣ ಮತ್ತು ಪ್ರಸಾದ್ ಕುಮಾರ್ ರವರು ಜೂ.30 ರಂದು ದೈವಸ್ಥಾನದ ವಠಾರದಲ್ಲಿ ಅಷ್ಟ ಮಂಗಲ ಪ್ರಶ್ನಾ ಚಿಂತನೆ ಇರಿಸಿದರು.


ಸುಳ್ಯ ನಗರ ಪಂಚಾಯತ್ ಮಾಜಿ ನಾಮ ನಿರ್ದೇಶನ ಸದಸ್ಯ ಬೂಡು ರಾಧಾಕೃಷ್ಣ ರೈ ಯವರು ನೇತೃತ್ವ ವಹಿಸಿದ್ದರು. ಬೂಡು ಪರಿಸರದ ಭಕ್ತಾದಿಗಳು ಮತ್ತು ಕಾಲನಿಯ ನಿವಾಸಿಗಳು ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.