ಅರಿಕೋಡಿ ಧರ್ಮದರ್ಶಿ ಹರೀಶ್ ಡಾ. ರವಿ‌ ಕಕ್ಕೆಪದವು ಮನೆ ಭೇಟಿ

0

ಬೆಳ್ತಂಗಡಿ ತಾಲೂಕಿನ ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಹರೀಶ್ ರವರು ಇಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯದ ರವಿ ಕಕ್ಕೆಪದವು‌ ಸೇವಾ‌ ಟ್ರಸ್ಟ್‌ನ ಸಂಸ್ಥಾಪಕ ಸುಬ್ರಹ್ಮಣ್ಯದ ಉದ್ಯಮಿ ಡಾ. ರವಿ ಕಕ್ಕೆಪದವು ಮತ್ತು ಸುಮಾರು ನೂರಕ್ಕೂ ಅಧಿಕ ಮಂದಿ ಅರಿಕೋಡಿ ದೇವಸ್ಥಾನದ ಭಕ್ತಾದಿಗಳು ಧರ್ಮದರ್ಶಿಗಳನ್ನು ಬರಮಾಡಿಕೊಂಡರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದು ಪ್ರಸಾದ ಸ್ವೀಕರಿಸಿದರು.

ತದನಂತರ ರವಿ ಕಕ್ಕೆ ಪದವು ಅವರ ನಿವಾಸಕ್ಕೆ ಭೇಟಿ ನೀಡಿದರು. ಡಾ. ರವಿ ಕಕ್ಕೆಪದವುರವರ ಮನೆಯಲ್ಲಿ ಧರ್ಮದಶಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ ಎಣ್ಣೆಮಜಲು, ಸೀನಿಯರ್ ಚೇಂಬರ್ ನ ಅಧ್ಯಕ್ಷ ವಿಶ್ವನಾಥ ನಡುತೋಟ, ಸೇವಾ ಟ್ರಸ್ಟಿನ ಅಧ್ಯಕ್ಷ ಡಾ. ರವಿ ಕಕ್ಕೆಪದವು, ಟ್ರಸ್ಟಿನ ಸದಸ್ಯರುಗಳಾದ ಪ್ರಕಾಶ್ ಕುಂದಾಪುರ, ಸಚಿನ್ ನಾಯ್ಕ್, ಶ್ರೀಮತಿ ಗೀತಾ ರವಿ ಹಾಗೂ ರವಿ ಕಕ್ಕೆ ಪದವು ಮನೆಯವರು ಉಪಸ್ಥಿತರಿದ್ದರು.