ಗುರುಂಪು ಬರೆಕುಸಿತದ ಭೀತಿಯಲ್ಲಿರುವ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

0

ಅವಶ್ಯಕತೆ ಬಂದರೆ ಸ್ಥಳೀಯರನ್ನು ಸ್ಥಳಾಂತರಿಸುವಂತೆ ನ.ಪಂ. ಮುಖ್ಯಾಧಿಕಾರಿಗೆ ಸೂಚನೆ

ಭಾರಿ ಮಳೆಗೆ ಸುಳ್ಯದ ಗುರುಂಪು ಬಳಿ ಇಂದು ಮುಂಜಾನೆ ಬರೆ ಕುಸಿತ, ತಡೆಗೋಡೆ ಕುಸಿತದಂತಹ ಘಟನೆಗಳು ನಡೆಯುತ್ತಿದ್ದು ಈ ಪ್ರದೇಶಕ್ಕೆ ಇಂದು ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತ ದೃಷ್ಟಿಯಿಂದ ಅವಶ್ಯಕತೆ ಬಂದಲ್ಲಿ ಸ್ಥಳೀಯ ಜನರನ್ನು ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ ತಹಶೀಲ್ದಾರ್ ಮಂಜುನಾಥ್, ಪುತ್ತೂರು ವಿಭಾಗದ ಡಿ ವೈ ಎಸ್ ಪಿ ಡಾ. ಪಿ ಗಾನ ಕುಮಾರ್,ಎಸ್ ಐ ಈರಯ್ಯ, ವಿ ಎ ತಿಪ್ಪೇಶ್, ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್, ಮೊನ ಪಂ ಸದಸ್ಯ ಶರೀಫ್ ಕಂಠಿ ಮೊದಲಾದವರು ಉಪಸ್ಥಿತರಿದ್ದರು.