ಬಜೆಟ್ ನಲ್ಲಿ ಎಲ್ಲ ವರ್ಗದವರಿಗೂ ಸಮಾನ ಪಾಲು : ಪಿ.ಎಸ್.ಗಂಗಾಧರ್

0

ಈ ಬಾರಿಯ ಬಜೆಟ್ ಒಂದು ಐತಿಹಾಸಿಕ‌ ಬದಲಾವಣೆಗೆ ನಾಂದಿ‌ ಹಾಡುತ್ತಿದೆ. ಸರಕಾರ ಈಗಾಗಲೇ ಘೋಷಿಸಿರುವ ಯೋಜನೆಗಳಿಗೆ ಹಣವನ್ನು ಮೀಸಲಿಟ್ಟು ಉಳಿದಂತೆ ಎಲ್ಲ‌ ಕ್ಷೇತ್ರಗಳಿಗೆ ಸಂವಿಧಾನದ ಆಶಯದಂತೆ ಸಮಾನ ಹಂಚಿಕೆಯನ್ನು ಮಾಡಿ ಎಲ್ಲ ವರ್ಗದ ಜನರಿಗೆ ಪಾಲು ದೊರೆಯುವಂತೆ ಅನುದಾನವನ್ನು ನಿಗದಿ ಮಾಡಿರುವುದು ಎದ್ದು ಕಾಣುತ್ತಿದೆ. ಕೃಷಿಕರಿಗೆ ಶೂನ್ಯ‌ ಬಡ್ಡಿದರದಲ್ಲಿ ಸಾಲ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದು , ದೀರ್ಘಾವಧಿ ಸಾಲದ ಮಿತಿಯನ್ನು ಏರಿಸಿರುವುದು ಈ ಸರಕಾರ ನುಡಿದಂತೆ ನಡೆಯುತ್ತೇವೆ ಎಂಬುದಕ್ಕೆ ಇದಕ್ಕಿಂತ ಉತ್ತಮ‌ ಉದಾಹರಣೆ‌ ಬೇಕಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ.