ಅರಂತೋಡು ಮದರಸದಲ್ಲಿ ಮುಅಲ್ಲಿಂ ಡೇ ಆಚರಣೆ

0

ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದಲ್ಲಿ ಮುಅಲ್ಲಿಂ ಡೇಯನ್ನು ಜಮಾತ್ ಅಧ್ಯಕ್ಷ ಆಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ದುವಾಃ ನೆರವೇರಿಸಿ ಮಾತನಾಡಿದ ಸದರ್ ಬಹು ಅಫ್ರೀದ್ ಮುಕ್ರೂಮಿ ಮುಅಲ್ಲಿಂ ಡೇಯ ಧ್ಯೇಯ ಉದ್ದೇಶವನ್ನು ವಿವರಿಸುತ್ತಾ ಇಂದು ಹಲವಾರು ಉಸ್ತಾದ್‌ರು ನಮ್ಮನ್ನು ಆಗಲಿದ್ದಾರೆ ಅವರಿಗಾಗಿ ವಿಶೇಷ ಪ್ರಾರ್ಥನಾ ಸಂಗಮ ಹಾಗೂ ಫಂಡ್‌ನ್ನು ಸಂಗ್ರಹಿಸಿ ಮಸೀದಿ, ಮದರಸಗಳಲ್ಲಿ ದುಡಿಯುತ್ತಿರುವ ಶಿಕ್ಷಕರು ಮತ್ತು ಅವರ ಕುಟುಂಬಸ್ಥರು ಅನಾರೋಗ್ಯ ಪೀಡಿತರಾದಾಗ, ಮನೆ ನಿರ್ಮಾಣ, ಹೆಣ್ಣು ಮಕ್ಕಳ ವಿವಾಹ ಸಂದರ್ಭದಲ್ಲಿ ಸಹಾಯ ಹಸ್ತವನ್ನು ನೀಡುವ ಕೆಲಸವನ್ನು ಸಮಸ್ತ ನಿರ್ವಹಿಸುತ್ತದೆ. ಅದಕ್ಕಾಗಿ ತಮ್ಮೆಲ್ಲರ ಸಹಕಾರ ಅತೀ ಆಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಅದ್ಯಾಪಕ ಶಾಫಿ ಮುಸ್ಲಿಯಾರ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್,ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬದ್ರುದ್ದೀನ್ ಪಠೇಲ್, ಎಸ್ ಕೆ ಎಸ್ ಎಸ್ ಎಫ್‌ನ ಅಧ್ಯಕ್ಷ ಆಶಿಕ್, ಜುಬೈರ್ ಎಸ್ ಇ, ಸಂಶುದ್ಧೀನ್ ಕ್ಯೂರ್, ಮುಜೀಬ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮದರಸ ಮ್ಯಾನೇಜ್‌ಮೆಂಟ್ ವತಿಯಿಂದ ಮದರಸ ಅದ್ಯಾಪಕರನ್ನು ಗೌರವಿಸಲಾಯಿತು. ಸಂಚಾಲಕರಾದ ಅಮೀರ್ ಕುಕ್ಕುಂಬಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.