ಮೊಹರಂ ಪ್ರಯುಕ್ತ ಹರ್ಲಡ್ಕ ವಿಲ್ಲಾದಲ್ಲಿ ಮದನೀಯಂ ಮಜ್ಲಿಸ್

0

ಮುಸಲ್ಮಾನರ ಹೊಸ ವರ್ಷದ ಪ್ರಥಮ ತಿಂಗಳು ಮೊಹರಂ. ಈ ಮೊಹರಂ ಆಗಮನದ ಪ್ರಥಮ ಪುಣ್ಯದಿನದ ಮದನೀಯಂ ಮಜ್ಲಿಸ್ ಕಾರ್ಯಕ್ರಮವು ಇತ್ತೀಚಿಗೆ ಉದ್ಘಾಟನೆಗೊಂಡ ಹರ್ಲಡ್ಕ ವಿಲ್ಲಾದಲ್ಲಿ ನಡೆಯಿತು.


ಪ್ರಮುಖ ಧಾರ್ಮಿಕ ಪಂಡಿತ ಮದನೀಯಂ ಖ್ಯಾತಿಯ ಅಬ್ದುಲ್‌ ಲತೀಫ್ ಸಖಾಫಿ ಕಾಂದಪುರಂ ನೇತ್ರತ್ವದಲ್ಲಿ ಮದನೀಯಂ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ ಜನತಾ, ಸುಳ್ಯ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್‌ ಹಮೀದ್ ಬೀಜಕೊಚ್ಚಿ, ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ, ಉಪಾಧ್ಯಕ್ಷ ಎಸ್.ಪಿ ಅಬೂಬಕ್ಕರ್, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್‌ ಹಮೀದ್ ಜನತಾ, ಉಮ್ಮರ್ ಹಾಜಿ ಕಟ್ಟೆಕ್ಕಾರ್, ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ, ಅನ್ಸಾರಿಯಾ ಸಂಸ್ಥೆಯ ಅಧ್ಯಾಪಕರಾದ ಸಯ್ಯಿದ್ ಹುಸೈನ್ ಸ‌ಅದಿ, ನೌಶಾದ್ ಮದನಿ, ಅಬ್ದುಲ್ಲಾ ಹಿಮಮಿ ಸಖಾಫಿ , ಹಂಝತ್ತುಲ್ ಖರ್ರಾರ್ ಸಖಾಫಿ ಅಲ್ ಮುಈನಿ, ಸಂಸ್ಥೆಯ ಮೆನೇಜರ್ ಮುಹಮ್ಮದ್ ಉವೈಸ್ ಬೀಟಿಗೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಾಂಧಿನಗರ ಜಮಾಅತ್ ಕಮಿಟಿ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್, ಅನ್ಸಾರಿಯ ಎಜುಕೇಶನ್ ಸೆಂಟರ್, ಹಾಗೂ ಹರ್ಲಡ್ಕ ವಿಲ್ಲಾದ ವತಿಯಿಂದ ಮದನೀಯಂ ಲತೀಫ್ ಸಖಾಫಿ ಹಾಗೂ ಅವರ ಅಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ನಿರ್ವಹಿಸುವ ಉಸ್ತಾದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಸರ್ವರನ್ನೂ ಸ್ವಾಗತಿಸಿ ಬರಮಾಡಿಕೊಂಡರು.
ಅನ್ಸಾರಿಯ ಮುದರ್ರಿಸ್ ಅಬೂಬಕ್ಕರ್ ಹಿಮಮಿ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.