ಶ್ರೀಮತಿ ವೈಷ್ಣವಿಯವರಿಗೆ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ

0

ಮಂಡೆಕೋಲು ಗ್ರಾಮದ ಬೊಳುಗಲ್ಲು ಸುಬ್ರಹ್ಮಣ್ಯ ಬಿ.ಎಸ್.ರವರ ಪತ್ನಿ ಶ್ರೀಮತಿ ವೈಷ್ಣವಿಯವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಬೆಂಗಳೂರಿನ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಸೈನ್ಸಿಫಿಕ್ ರೀಸರ್ಚ್ ನ | ಸಂಶೋಧನಾ ವಿದ್ಯಾರ್ಥಿಯಾಗಿರುವ ಶ್ರೀಮತಿ ವೈಷ್ಣವಿ Heterogeneous I Catalysis ಕ್ಷೇತ್ರ ದಲ್ಲಿ, ಡಾ. ಗಣಪತಿ ವಿ ಶಾನಭಾಗ್ ಅವರ ಮಾರ್ಗದರ್ಶನದಲ್ಲಿ I “Designing novel catalysts for conversion of biomass derivatives I furfuryl alcohol and levulinic acid into value-added chemicals” ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ವೈಷ್ಣವಿ ಯವರು ಕೇಂದ್ರ ಸರಕಾರದ ಪತಿಷ್ಠಿತ Council of Scientific & I Industrial Research Jo SRF eise (CSIR-SRF Direct) ಪಡೆದಿರುವುದಷ್ಟೇ ಅಲ್ಲದೆ, ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಅತ್ಯುತ್ತಮ ಮಂಡನೆಗಾಗಿ 6 “Best Presentation award” ಪಡೆದಿದ್ದಾರೆ. ಇವರು ಬರೆದ 4 ಸಂಶೋಧನಾ ಲೇಖನಗಳು ಪ್ರತಿಷ್ಠಿತ ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ ಹಾಗು 3 ಲೇಖನಗಳು ಪ್ರಕಟವಾಗುವ ಪ್ರಕ್ರಿಯೆಯಲ್ಲಿವೆ. ಇವರು ಸಹಲೇಖಕರಾಗಿ ಬರೆದ 2 ಪಠ್ಯ | ಅಧ್ಯಾಯಗಳನ್ನು ಪ್ರತಿಷ್ಠಿತ Springer-Nature ಮತ್ತು Elsevier ಪ್ರಕಾಶನಗಳು ಪ್ರಕಟಿಸಿವೆ .

ವೈಷ್ಣವಿಯವರು ಕುಶಾಲನಗರದ ಶಿಕ್ಷಕಿ ಶ್ರೀಮತಿ ಚಿತ್ರಾ ಮತ್ತು ಉದ್ಯಮಿ ಜನಾರ್ಧನ ಅವರ ಸುಪುತ್ರಿಯಾಗಿದ್ದು, ಮಂಡೆಕೋಲು ಗ್ರಾಮದ ಪದ್ಮಾವತಿ ಮತ್ತು ದಿ. ಶಶಿಧರ ನಾಯಕ್ (ಮಾಜಿ ಸಿಇಓ ಮಂಡೆಕೋಲು CA ಬ್ಯಾಂಕ್ ಇವರ ಪುತ್ರ ಸುಬ್ರಮಣ್ಯ ಬಿ ಎಸ್ ಅವರ ಪತ್ನಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.