ಕರ್ನಾಟಕ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ನೂತನ ಸಮಿತಿ ಪದಗ್ರಹಣ ಕಾರ್ಯಕ್ರಮ

0

ಇಂಡಿಯನ್ ರಬ್ಬರ್ ಡೀಲರ್ಸ್ ಫೆಡರೇಶನ್ ಇದರ ಕರ್ನಾಟಕ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದು ಇದರ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು.ಸಮಾರಂಭದ ಉದ್ಘಾಟನೆಗೊಂಡಿತು ಐಆರ್ಡಿಎಫ್ ಅಧ್ಯಕ್ಷ ಜಾರ್ಜ್ ವ್ಯಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,ಬೆಳ್ತಂಗಡಿ ತಾಲೂಕು ರಬ್ಬರ್ ಸೊಸೈಟಿ ಕಾರ್ಯನಿರ್ವಾಣಾಧಿಕಾರಿ ರಾಜು ಶೆಟ್ಟಿ,ಹಿರಿಯ ಕೃಷಿಕ ಪಿ ಬಿ ಪ್ರಭಾಕರ ರೈ,ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಪತ್ರಕರ್ತ ಯಶ್ವಿತ್ ಕಾಳಂಮನೆ,ಐ ಆರ್ ಡಿ ಎಫ್ ಮಾಜಿ ಅಧ್ಯಕ್ಷ ಟೋಮಿ ಅಬ್ರಹಾಂ,ಐ ಆರ್ ಡಿ ಎಫ್ ವಿವಿಧ ಜಿಲ್ಲೆಗಳ ಪ್ರತಿನಿಧಿಗಳಾದ ಲಿಖಾಯತ್ ಆಲಿಖಾನ್,ಸನ್ನಿಜೋನ್,ಡಿಟ್ಟೊತೋಮಸ್,ಜಾರ್ಜಿಮಾಥನ್,ತೋಮಸ್ ಪಿನ್ನಪಳ್ಳಿ,ಜೋಶಿ ಕೆ ವಿ,ಜೋಬಿ ಇಟ್ಟಪರಂಬಿಲ್,ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುಳ್ಯ ಪ್ರಥಮ ರಬ್ಬರ್ ಡೀಲರ್ ವಿಶ್ವನಾಥ್ ರಾವ್ ರವರನ್ನು ಅಸೋಸಿಯೇಶನ್ ವತಿಯಿಂದ ಕರ್ನಾಟಕ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಅಬ್ದುಲ್ಲಾ ಸುಳ್ಯ ಕಾರ್ಸ್ ರವರು ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಾಜಿ ವರ್ಗಿಸ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಆರಂಭದಲ್ಲಿ ಕು.ಮೇಘ ಕೃಷ್ಣ ಆಶಯಗೀತೆ ಹಾಡಿದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪಾರೂಕ್ ಪೈಚಾರ್ ಸ್ವಾಗತಿಸಿ ಐ ಆರ್ ಡಿ ಎಫ್ ಸಂಯೋಜಕ ಬೀಜು ಬಿ ತೋಮಸ್,ಎಂ ಬಿ ಫೌಂಡೇಶನ್ ಟ್ರಸ್ಟಿ ಶರೀಫ್ ಸುದ್ದಿ ಕಾರ್ಯಕ್ರಮ ನಿರೂಪಿಸಿದರು.