ಲೇಖಕಿ‌ ಚಂದ್ರಾವತಿ‌ ಬಡ್ಡಡ್ಕ‌ರಿಗೆ ದತ್ತಿ‌ನಿಧಿ ಪ್ರಶಸ್ತಿ ಪ್ರದಾನ

0

ಬೆಂಗಳೂರಿನ‌ ನಯನ‌ ಸಭಾಂಗಣದಲ್ಲಿ ಜು. 23ರಂದು ನಡೆದ‌ ಕರ್ನಾಟಕ‌ ಲೇಖಕಿಯರ‌ ಸಂಘದಿಂದ‌ ಕೊಡಮಾಡುವ‌ ದತ್ತಿ‌ ಪ್ರಶಸ್ತಿಯನ್ನು‌ ಹಿರಿಯ ಪತ್ರಕರ್ತೆ ವೃತ್ತಿಪರ ಅನುವಾದಕಿ ಲೇಖಕಿ‌ ಚಂದ್ರಾವತಿ‌ ಬಡ್ಡಡ್ಕ‌ ಪಡೆದುಕೊಂಡರು.

ಇವರು ಬರೆದ ಲಘುಬಿಗು ಕೃತಿ 2022 ನೇ‌ ಸಾಲಿನ ನುಗ್ಗೇಹಳ್ಳಿ‌ ಪಂಕಜ ಹಾಸ್ಯ ವಿಭಾಗದ‌ ದತ್ತಿ ಪ್ರಶಸ್ತಿಗೆ‌ ಆಯ್ಕೆಯಾಗಿತ್ತು‌.

ಕರ್ನಾಟಕ‌ ಲೇಖಕಿಯರ‌ ಸಂಘವು ಹಮ್ಮಿಕೊಂಡಿದ್ದ‌ ಕಾರ್ಯಕ್ರಮದಲ್ಲಿ‌ ಸಂಘದ ಅಧ್ಯಕ್ಷೆ ಎಚ್‌ ಎಲ್‌ ಪುಷ್ಪಾ‌, ಜ್ಞಾನಪೀಠ‌ ಪುರಸ್ಕೃತ ಸಾಹಿತಿ ಚಂದ್ರಶೇಖರ‌ ಕಂಬಾರ‌,ಕನ್ನಡ‌ ಮತ್ತು‌ ಸಂಸ್ಕೃತಿ‌ ಇಲಾಖೆ‌ ಮಾಜಿ ಸಚಿವೆ‌ ರಾಣಿ ಸತೀಶ್, ದತ್ತಿ‌ ಪ್ರಶಸ್ತಿ ತೀರ್ಪುಗಾರರಾಗಿದ್ದ‌ ಹಿರಿಯ ಸಾಹಿತಿ‌, ಬಿಎಂಶ್ರೀ‌ ಪ್ರತಿಷ್ಠಾನದ ಅಧ್ಯಕ್ಷ‌ ಬೈರಮಂಗಲ‌ ರಾಮೇಗೌಡ, ಹಿರಿಯ‌ ವಿಮರ್ಷಕಿ‌ ಎಂ. ಎಸ್. ಆಶಾದೇವಿ‌ ಪ್ರಶಸ್ತಿ‌ ಪ್ರದಾನ‌ ಮಾಡಿದರು‌.

ನಾಡಿನ‌ ಹಲವು‌ ಲೇಖಕಿಯರಿಗೆ‌ 2020, 2021 ಹಾಗೂ‌ 2022 ಸಾಲಿನ‌ ದತ್ತಿ‌ ಪ್ರಶಸ್ತಿಗಳನ್ನು‌ ಇದೇ ಸಂದರ್ಭ ಹಸ್ತಾಂತರಿಸಲಾಯಿತು.