ಭಾರೀ ಮಳೆ : ಸುಬ್ರಹ್ಮಣ್ಯದಲ್ಲಿ ಅಲ್ಲಲ್ಲಿ ಜಾಲಾವೃತ

0

ಸುಬ್ರಹ್ಮಣ್ಯ ಮತ್ತು ಆಸುಪಾಸು ಭಾರಿ ಮಳೆ ಬಂದ ಕಾರಣ ಅಲ್ಲಲ್ಲಿ ಜಾಲಾವೃತ ವಾದ ಘಟನೆ ವರದಿಯಾಗಿದೆ. ಸುಬ್ರಹ್ಮಣ್ಯ ಬಳಿಯ ಕಲ್ಲಾಜೆ
ದೇವರಹಳ್ಳಿಯಲ್ಲಿ ಯಶೋದರ ಮತ್ತು ತಿರುಮಲೇಶ್ವರ ಹೊಸೋಕ್ಲು ಅವರ ಮನೆ ಜಲ ಆವೃತವಾಗಿದೆ ಎಂಬುದಾಗಿ ತಿಳಿದು ಬಂದಿದೆ.


ಸುಬ್ರಹ್ಮಣ್ಯದ ನೂಚಿಲ ಭಾಗದಲ್ಲೂ ಕುಮಾರಧಾರ ನದಿನೀರು ಹರಿವು ಜಾಸ್ತಿ ಆಗಿ ದೇವಳದ ಚೆಕ್ಕೆತೋಟ ಹಾಗು ಕೆಲವರ ತೋಟಕ್ಕೆ ನೀರು ನುಗ್ಗಿದೆ. ಕುಲ್ಕುಂದ ಕಾಲನಿ ಚಂದ್ರಶೇಖರ ಅವರ ಮನೆ ನೀರು ಸುತ್ತುವರಿದಿದೆ.

ಕುಮಾರಧಾರ ಕುಲ್ಕುಂದ ಬೀಡಿನಗದ್ದೆ ಕುದುರೆಮಜಲು ಸುತ್ತ ಕುಮಾರಧಾರ ನೀರು ಸುತ್ತುವರಿದಿದೆ. ಕುಮಾರಧಾರದ ಭೂಮಿಕಾ ಟೈಲರ್ ಶಾಪ್ ಗೆ ನೀರು ನುಗ್ಗಿದೆ.