ಬೊಳುಬೈಲು : ರಾಜ್ಯ ಹೆದ್ದಾರಿಯಲ್ಲಿ ಬೃಹತ್ತಾದ ಅಪಾಯಕಾರಿ ಹೊಂಡ

0

ಸ್ಥಳೀಯ ಯುವಕರಿಂದ ಶ್ರಮದಾನದ ಮೂಲಕ ದುರಸ್ತಿ ಕಾರ್ಯ

ಮಾಣಿ ಮೈಸೂರು ಹೆದ್ದಾರಿ ಬೊಳುಬೈಲು ಸಮೀಪ ರಸ್ತೆಯಲ್ಲಿ ಬೃಹತಾಕಾರದ ಹೊಂಡ ನಿರ್ಮಾಣವಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ತೀರ ಕಿರಿಕಿರಿ ಅನುಭವಿಸುತ್ತಿದ್ದರು.
ಕೆಲವೊಮ್ಮೆ ದ್ವಿಚಕ್ರ ವಾಹನಗಳು, ಬೇರೆ ಇನ್ನಿತರ ವಾಹನಗಳು ವೇಗವಾಗಿ ಬಂದು ಈ ಗುಂಡಿಯನ್ನು ತಪ್ಪಿಸಲು ಹೋಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿದೆ.

ಈ ಹಿನ್ನಲೆಯಲ್ಲಿ ಸ್ಥಳೀಯ ಯುವಕರು ಆಗಸ್ಟ್ 6 ರಂದು ಶ್ರಮದಾನದ ಮೂಲಕ ಹೊಂಡವನ್ನು ಮುಚ್ಚುವ ಕಾರ್ಯ ಮಾಡಿರುತ್ತಾರೆ. ಶ್ರಮದಾನದಲ್ಲಿ ಪೈಚಾರು ಕಾರುಣ್ಯ ಚಾರಿ ಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್‌ ಬಿ,ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಸ್ಥಳೀಯರಾದ ಸಿರಾಜ್ ಎಸ್ ಪಿ ಭಾಗವಹಿಸಿದ್ದರು.

ಕಾಂಕ್ರೀಟ್ ಗೊಳಿಸಲು ಹೊಯ್ಗೆ ಜಲ್ಲಿ,ಸಿಮೆಂಟ್ ಸಾಮಗ್ರಿಗಳನ್ನು ಸ್ಥಳೀಯ ಉದ್ಯಮಿ ಇಂಡಿಯನ್ ಇಂಡಸ್ಟ್ರೀಸ್ ಮಾಲಕ ನವಾಝ್ ನೀಡಿ ಸಹಕರಿಸಿದ್ದಾರೆ.