ಸೌಜನ್ಯ ಹತ್ಯೆಗೆ ನ್ಯಾಯ ಕೇಳಿ ಸುಳ್ಯದಲ್ಲಿ ಪ್ರತಿಭಟನೆ

0

ನಾಳೆ ತಿಮರೋಡಿ ಉಪಸ್ಥಿತಿಯಲ್ಲಿ ನಿಂತಿಕಲ್ಲಿನಿಂದ ಸುಳ್ಯದ ವರೆಗೆ ಜಾಥಾ

ಸೌಜನ್ಯ ಪ್ರಕರಣ ಸುಳ್ಯ ತಾಲೂಕಿನಲ್ಲಿ ಕೂಡಾ ಪ್ರತಿಭಟನೆಯ ಅಲೆಗಳನ್ನು ಎಬ್ಬಿಸಿದ್ದು, ಸೌಜನ್ಯ ಪರ ಹೋರಾಟ ಸಮಿತಿ ರಚನೆಗೊಂಡಿದೆ. ಅದರ ನೇತೃತ್ವದಲ್ಲಿ ನಾಳೆ ನಿಂತಿಕಲ್ಲಿನಿಂದ ಸುಳ್ಯದವರೆಗೆ ವಾಹನ ಜಾಥಾ ಏರ್ಪಡಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ತಾಯಿ ಕುಸುಮಾವತಿಯವರು ಭಾಗವಹಿಸಲಿದ್ದಾರೆ.