ಸುಳ್ಯ ಗುರುಂಪು ಬಳಿ ಬೈಕ್ ಗುದ್ದಿ ದನ ಸಾವು – ಬೈಕ್ ಸವಾರನಿಗೆ ಗಾಯ

0

ಸುಳ್ಯ ಗಾಂಧಿನಗರದಿಂದ ಆಲೆಟ್ಟಿ ಸಂಚರಿಸುವ ರಸ್ತೆಯ ಗುರುಂಪು ಎಂಬಲ್ಲಿ ಬೈಕೊಂದು ದನಕ್ಕೆ ಡಿಕ್ಕಿ ಹೊಡೆದು ದನ ಸಾವಿಗೀಡಾದ ಘಟನೆ ಆ.8 ರಂದು ವರದಿಯಾಗಿದೆ.

ಕಲ್ಲುಮುಟ್ಲುವಿನಿಂದ
ಸುಳ್ಯ ಕಡೆಗೆ ಪ್ರಸನ್ನ ಚೊಕ್ಕಾಡಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕಿಗೆ ಗುರುಂಪು ಬಳಿ ತಲುಪುತ್ತಿದ್ದಂತೆ ದನವೊಂದು ಅಡ್ಡ ಬಂದ ಪರಿಣಾಮ ಡಿಕ್ಕಿ ಹೊಡೆಯಿತು. ಡಿಕ್ಕಿ ಸಂಭವಿಸಿದ ಪರಿಣಾಮ ಸವಾರನ ತಲೆಯ ಮತ್ತು ಕಾಲಿನ ಭಾಗಕ್ಕೆ ಗಾಯ ವಾಯಿತು. ಸ್ಥಳೀಯ ಯುವಕರು ಸೇರಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಬೈಕ್ ಹೊಡೆದ ರಭಸಕ್ಕೆ ದನಕ್ಕೆ ಏಟಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿತ್ತು. ಇದನ್ನು ಮನಗಂಡ ಬಜರಂಗದಳ ಕಾರ್ಯಕರ್ತರು ತಕ್ಷಣ ಪಶು ವೈದ್ಯರಾದ ಡಾ. ನಿತಿನ್ ಪ್ರಭುರವರನ್ನು ಸಂಪರ್ಕಿಸಿದರು. ಸ್ಪಂದಿಸಿದ ವೈದ್ಯರು ಡಾ. ದೇವರಾಜ್ ರವರನ್ನು ಸ್ಥಳಕ್ಕೆ ಕಳುಹಿಸಿದರು.


ಸ್ಥಳದಲ್ಲಿ ಚಿಕಿತ್ಸೆ ನೀಡಿದ ಬಳಿಕ ದನವನ್ನು ಅಲ್ಲಿಂದ ವಾಹನದ ಮೂಲಕ ಕರೆ ತರಲಾಯಿತು. ವಿಪರೀತ ಪ್ರಮಾಣದ ಏಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಮಯದಲ್ಲಿ ದನ ಸಾವಿಗೀಡಾಯುತು.
ಸ್ಥಳೀಯ ಬಜರಂಗದಳ ಕಾರ್ಯಕರ್ತರು ಜೆ.ಸಿ.ಬಿ.ಯಿಂದ ಹೊಂಡ ತೆಗೆಸಿ ರಾತ್ರಿಯೇ ಹಳೆಗೇಟು ಬಳಿ ದನದ ದಫನ ಕಾರ್ಯವನ್ನು ನೆರವೇರಿಸಿದರು.
ಬೈಕ್ ಸವಾರ ಪ್ರಸನ್ನ ರವರುಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.