ನಿವೃತ್ತ ಶಿಕ್ಷಕಿ ಯಶೋಧ ನಿಧನ

0

ಕಲ್ಲುಗುಂಡಿ ಶಾಲೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದ, ಮಂಗಳೂರಿನ ದೇರಳಕಟ್ಟೆ ಮನೆಯ ಯಶೋಧ ಟೀಚರ್ ರವರು ಆ.7ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 73 ವರ್ಷವಾಗಿತ್ತು.


ಕಲ್ಲುಗುಂಡಿಯ ಸರ್ಕಾರಿ ಶಾಲೆಯಲ್ಲಿ ಇವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.

ಮೃತರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿವೃತ್ತ ಅಧಿಕಾರಿ ಪತಿ ಡಿ.ಚಂದಪ್ಪ ಪೂಜಾರಿ,ಪುತ್ರರಾದ ಮಂಗಳೂರು ನವಬಂದರ್ ಮಂಡಳಿಯಲ್ಲಿ ಸಹಾಯಕ ಅಭ್ಯಂತರರಾಗಿ ಸೇವೆ ಸಲ್ಲಿಸುತ್ತಿರುವ ಧನಂಜಯ ಕೆ.ಸಿ., ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ.ಅನಿಲ್ ಕುಮಾರ್ ಕೆ.ಸಿ.,ಬೆಂಗಳೂರಿನಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಆಗಿರುವ ಭರತೇಶ್ ಕೆ.ಸಿ ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.