ಮಂಗಳೂರು ಗೌಡ ಸಮಾಜದ ಹಿರಿಯ ವಾಸುದೇವ ಗೌಡ ಪಡ್ಪು ನಿಧನ

0

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಓರ್ವರಾದ ಮಂಗಳೂರಿನ ಕದ್ರಿ ನಿವಾಸಿ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರಮುಡ್ನೂರು ಗ್ರಾಮದ ಪೈಲಾರಿನ ಪಡ್ಪು ವಾಸುದೇವ ಗೌಡರು ಆ.13 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮೃತರ ಅಂತ್ಯ ಸಂಸ್ಕಾರ ನಾಳೆ (ಆ. 14) ರಂದು ಅವರ ಮೂಲ ನಿವಾಸ ಪಡ್ಪು ಪೈಲಾರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.