ಉಬರಡ್ಕ : ಅಟಿಡೊಂಜಿ ಎಡ್ಡೆ ದಿನ ಕ್ರೀಡಾಕೂಟ

0

ಯುವಕಮಂಡಲ ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ ಅಟಿಡೊಂಜಿ ಎಡ್ಡೆ ದಿನ ಕ್ರೀಡಾಕೂಟವು ಆ.13 ರಂದು ಜರುಗಿತು
ಕ್ರೀಡಾಕೂಟದ ಉದ್ಘಾಟನೆಯನ್ನು ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನಯಕುಮಾರ್ ಬೆಳ್ಳಿಪ್ಪಾಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ದೇವಪ್ಪ ಆಚಾರ್ಯ ಕಲ್ಚಾರ್ ವಹಿಸಿದ್ದರು.


ಗ್ರಾಮಪಂಚಾಯತ್ ಸದಸ್ಯರಾದ ಅನಿಲ್ ಬಳ್ಳಡ್ಕ, ಉಬರಡ್ಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಹೇಮಾವತಿ ಯವರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ ಗ್ರಾಮ ಪಂಚಾಯತ್ ಸದಸ್ಯ ಉದ್ಯಮಿ ಹರೀಶ್ ಉಬರಡ್ಕ, ಉಬರಡ್ಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುರುಷೋತ್ತಮ್ ಪಾಪುನಡ್ಕ, ಶ್ರೀ ನಂದಿನಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಕೈಪೆ ಭಾಗವಹಿಸಿದ್ದರು. ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಈಶ್ವರ್ ಕಲ್ಚಾರ್ ರವರು ಬಹುಮಾನವನ್ನು ವಿತರಿಸಿದರು. ಯುವಜನ ಸಂಯುಕ್ತ ಮಂಡಳಿಯ ಜತೆ ಕಾರ್ಯದರ್ಶಿ ಶ್ರೀಮತಿ ನಮಿತ ಹರ್ಲಡ್ಕ, ಪ್ರಧಾನಕಾರ್ಯದರ್ಶಿ ಲೋಕೇಶ್ ಪಟ್ರುಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಚಿನ್ಮಯಿ ಮತ್ತು ಕು. ಅಪರ್ಣ ರವರು ಪ್ರಾರ್ಥಿಸಿದರು ಯುವಕಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿ ರಕ್ಷಿತ್ ಉಬರಡ್ಕ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಕೋಶಾಧಿಕಾರಿ ಮನೋಹರ್ ಕಾಚೇಲು ಸ್ವಾಗತಿಸಿದ ಕಾರ್ಯಕ್ರಮವನ್ನು ನಿರ್ದೇಶಕ ಪ್ರವೀಣ್ ಉಬರಡ್ಕ ನಿರೂಪಿಸಿದರು. ನಂತರ ಪೂರ್ವಧ್ಯಕ್ಷರಾದ ರಾಜ್ ಸೋಲಾರ್ ಇದರ ಮಾಲಕರಾದ ರಾಜೇಶ್ ಭಟ್ ರವರು ವಂದಿಸಿದರು.