ಕನಕಮಜಲಿನಲ್ಲಿ ಅಗ್ನಿವೀರ್ ಕಿಶೋರ್ ಅವರಿಗೆ ರಾಷ್ಟ್ರಧ್ವಜ ನೀಡಿ ಸ್ವಾಗತಿಸಿದ ಗ್ರಾಮಸ್ಥರು

0

ಉತ್ತರಕಾಂಡ್ ನಲ್ಲಿ ಅಗ್ನಿವೀರ್ ತರಬೇತಿ ಮುಗಿಸಿ ತಾಯ್ನಾಡಿಗೆ ಹಿಂತುಗಿದ ಅಗ್ನಿವೀರ್ ಕಿಶೋರ್ ಶೇಷನಡ್ಕ ಅವರನ್ನು ಕನಕಮಜಲಿನಲ್ಲಿ ಗ್ರಾಮಸ್ಥರು ರಾಷ್ಟ್ರಧ್ವಜ ನೀಡಿ ಸ್ವಾಗತಿಸಿ, ಬರಮಾಡಿಕೊಂಡರು.
ಕನಕಮಜಲು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಅಗ್ನಿವೀರ್ ಕಿಶೋರ್ ಅವರಿಗೆ ರಾಷ್ಟ್ರಧ್ವಜ ನೀಡಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ತಿಲೋತ್ತಮ ಗೌಡ ಕೊಲ್ಲಂತಡ್ಕ, ಹೇಮಂತ್ ಮಠ, ಬಾಲಕೃಷ್ಣ ಗೌಡ ಕಜೆಗದ್ದೆ , ಗಂಗಾಧರ ಕಾಳಮನೆ, ಶೇಖರ ಕಾಳಮನೆ, ವಚನ್ ಕಾಳಮನೆ, ಕವನ್ ಕಾಳಮನೆ, ಸಿ.ಹೆಚ್. ಖಾದರ್ ಕದಿಕಡ್ಕ ಸೇರಿದಂತೆ ಜಾಲ್ಸೂರು ಮತ್ತು ಕನಕಮಜಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.