ಜಾಲ್ಸೂರು: ಅಗ್ನಿವೀರ್ ತರಬೇತಿ ಮುಗಿಸಿ ಊರಿಗೆ ಮರಳಿದ ಕಿಶೋರ್ ಶೇಷನಡ್ಕ ಅವರಿಗೆ ಸನ್ಮಾನ

0

ಉತ್ತರಕಾಂಡದಲ್ಲಿ ಅಗ್ನಿವೀರ್ ತರಬೇತಿ ಮುಗಿಸಿ, ತಾಯ್ನಾಡಿಗೆ ಹಿಂತುರುಗಿದ ಕಿಶೋರ್ ಶೇಷನಡ್ಕ ಅವರನ್ನು ಜಾಲ್ಸೂರು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ, ಬರಮಾಡಿಕೊಂಡರು.
ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಿಶೋರ್ ಅವರನ್ನು ಭಜನಾ ಮಂದಿರದ ಅಧ್ಯಕ್ಷ ಎಸ್.ಬಾಬು ಪಾಟಾಳಿ ಅರಿಯಡ್ಕ, ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಸೇರಿದಂತೆ ಗ್ರಾಮಸ್ಥರು ಹಾರ ಹಾಕಿ ಬರಮಾಡಿಕೊಂಡರು.


ಕಿಶೋರ್ ಅವರು ಜಾಲ್ಸೂರು ಗ್ರಾಮದ ಶೇಷನಡ್ಕ ಕೃಷ್ಣಪ್ಪ ನಾಯ್ಕ ಹಾಗೂ ಶ್ರೀಮತಿ ಪ್ರೇಮ ದಂಪತಿಯ ಪುತ್ರ.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮಸ್ಥರು ಉಪಸ್ಥಿತರಿದ್ದರು.