ಹರಿಹರ ಪಲ್ಲತಡ್ಕ : ಪಾಲ್ತಾಡು ಬಳಿ ಹಾಡು ಹಗಲೇ ಒ.ಎಫ್. ಸಿ ಕೇಬಲ್ ಕದ್ದೊಯ್ದ ಕಳ್ಳರು

0

ಗಂಟೆಗಟ್ಟಲೆ ನೆಟ್ವರ್ಕ್ ಸ್ಥಗಿತ, ದುರಸ್ತಿ

ಹರಿಹರ ಪಲ್ಲತಡ್ಕ ಪಾಲ್ತಾಡು ಎಂಬಲ್ಲಿ ಆ.24 ರಂದು ಮಧ್ಯಾಹ್ನ ಒ.ಎಫ್. ಸಿ ಕೇಬಲ್ ನ ಕದ್ದೊಯ್ದ ಕಾರಣ ಗಂಟೆ ಗಟ್ಟಲೆ ಬಿ.ಎಸ್. ಎನ್.ಎಲ್ ನೆಟ್ವರ್ಕ್ ಸ್ತಗಿತಗೊಂಡು ಬಳಿಕ ಅಧಿಕಾರಿಗಳು ದುರಸ್ತಿ ಪಡಿಸಿದ ಘಟನೆ ವರದಿಯಾಗಿದೆ.

ಸುಮಾರು 20 ಮೀ ಕೇಬಲ್ ನ್ನು ಒಂದು ವರ್ಷ ಹಿಂದೆ ರಸ್ತೆ ದುರಸ್ತಿ ಸಂದರ್ಭ ಕೇಬಲ್ ಕಣಿಯಿಂದ ತೆಗೆದು ರಸ್ತೆ ಮೇಲೆ ಬಿಡಲಾಗಿತ್ತು. ಅದನ್ನು ಯಾರೋ ತುಂಡರಿಸಿ ಕದ್ದೊಯ್ದು ಕಾರಣ ಹರಿಹರದ ಸುಮಾರು 350 ಆಧಿಕ ಗ್ರಾಹಕರು ನೆಟ್ವರ್ಕ್ ಕಳೆದುಕೊಂಡಿದ್ದರು. ಇದನ್ನು ಒ.ಎಫ್.ಸಿ ವಿಭಾಗದ ಜೂನಿಯರ್ ಅಫೀಸರ್ ಹೇಮಂತ್, ಟೆಕ್ನಿಶಿಯನ್ ಅಶೋಕ್, ವಿನಯ್ ದುರಸ್ತಿ ಮಾಡಿ ನೆಟ್ವರ್ಕ್ ಬರುವಂತೆ ಮಾಡಿದರು. ಜಯಪ್ರಕಾಶ್ ಕಜ್ಜೋಡಿ ಸಹಕರಿಸಿದರು.