ಪ್ಲಾಟಿಂಗ್ ಸಮಸ್ಯೆ‌ ನಿವಾರಣೆಗೆ ಸುಳ್ಯ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಿಂದ ಕಂದಾಯ ಸಚಿವರಿಗೆ ಮನವಿ

0

ಪ್ಲಾಟಿಂಗ್ ‌ಆಗದೆ‌ ಕಡತ ಬಾಕಿ ಇರುವುದರಿಂದ ಜನರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಗೆ ಸುಳ್ಯ ಯೂತ್‌ಕಾಂಗ್ರೆಸ್ ಉಪಾಧ್ಯಕ್ಷ ‌ರಂಜಿತ್ ಮೇನಾಲರು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣೇ‌ ಬೈರೆಗೌಡರನ್ನು‌ ಭೇಟಿಯಾಗಿ ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ಪ್ಲಾಟಿಂಗ್ ಆಗದೆ ಹಲವು ಕಡತಗಳು‌ ಬಾಕಿ ಇದೆ. ಮುಖ್ಯವಾಗಿ ಅಜ್ಜಾವರ ಗ್ರಾಮದಲ್ಲಿ ಪ್ಲಾಟಿಂಗ್ ಆಗದೇ ಆಗುತ್ತಿರುವ ಸಮಸ್ಯೆಯ‌ ಕುರಿತು ತಿಳಿಸಿದರಲ್ಲದೆ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರು ಕೇಳಿಕೊಂಡಿದ್ದಾರೆ.

ಅವರ‌ ಜತೆ ಸೌಕತ್ ಅಲಿ ಮೇನಾಲ ಇದ್ದರು.