ಮಂಡೆಕೋಲು ಮರಣ ಸಾಂತ್ವನ ನಿಧಿ‌ ವಿತರಣೆ

0

ಮಂಡೆಕೋಲು ಸಹಕಾರ ಸಂಘದ ವತಿಯಿಂದ‌‌ ಸಂಘದ ಸದಸ್ಯರಾಗಿದ್ದು‌ ಇತ್ತೀಚೆಗೆ ನಿಧನರಾದ ಶೇಖರ್ ಮಂಡೆಕೋಲುರವರ ಮನೆಯವರಿಗೆ ಸಹಕಾರ ಸಂಘದಿಂದ ಮರಣ ಸಾಂತ್ವನ ನಿಧಿಯನ್ನು ಆ.29 ರಂದು ನೀಡಲಾಯಿತು.

ಅಲ್ಲದೆ ಇತ್ತೀಚಿಗೆ ನಿಧನರಾದ ಲವ ಆಚಾರ್ಯ, ಶ್ರೀಮತಿ ಸಾಂತಮ್ಮ, ದೇವಣ್ಣ ನಾಯಕ್ ಮಾವಂಜಿಯವರ ಮನೆಯವರಿಗೂ ಸಾಂತ್ವನ ನಿಧಿ ಸಹಕಾರ ಸಂಘದಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು, ಪನಿರ್ದೇಶಕರಾದ ಸುರೇಶ್ ಕಣೆಮರಡ್ಕ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಆದ ಅನೀಲ್ ತೋಟಪ್ಪಾಡಿ ಹಾಗೂ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾದಿಕಾರಿ ಉದಯಕುಮಾರ್ ಜಿ ಹಾಗೂ ಸಂಘದ ಸಿಬಂದಿಗಳು ಸಹಕರಿಸಿದರು.