ಧನ್ಯ ಸ್ಟೋರ್ ವಿಸ್ತೃತಗೊಂಡು ಶುಭಾರಂಭ

0

ಆರಿಕೋಡಿ ಧರ್ಮದರ್ಶಿಗಳಿಂದ ದೀಪ ಬೇಳಗಿಸಿ ಉದ್ಘಾಟನೆ

ಸುಳ್ಯದ ಬಾಳೆಮಕ್ಕಿಯಲ್ಲಿ ಸುಮಾರು 35 ವರ್ಷಗಳಿಂದ ಕಾರ್ಉಚರಿಸುತ್ತಿರುವ ಧನ್ಯ ಸ್ಟೋರ್ ವಿಸ್ತೃತಗೊಂಡು ಇಂದು ಶುಭಾರಂಭಗೊಂಡಿತು.

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಸಂಸ್ಥೆಯ ಬಗ್ಗೆ ಮಾತನಾಡಿ ಆಶೀರ್ವದಿಸಿದರು.
ಮುಖ್ಯ ಅತಿಥಿಗಳಾದ ರಾಜಶ್ರೀ ಕಾಂಪ್ಲೆಕ್ಸ್ ನ ಮಾಲಕರಾದ ಇಂಜಿನಿಯರ್ ಕೆ.ಆರ್.ಕೃಷ್ಣರಾವ್ ಸಂಸ್ಥೆಗೆ ಶುಭಹಾರೈಸಿದರು.

ಸಂಸ್ಥೆಯ ಮಾಲಕರಾದ ಹರಿಶ್ಚಂದ್ರ ಬಾಬ್ಲುಬೆಟ್ಟು ಮತ್ತು ಶ್ರೀಮತಿ ವಾಣಿ ರವರು ಆರಿಕೋಡಿ ಕ್ಷೇತ್ರದ ದರ್ಮದರ್ಶಿ ಯವರನ್ನು ಹಾಗೂ ಇಂಜಿನಿಯರ್ ಕೃಷ್ಣರಾವ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನೂರಾರು ಗ್ರಾಹಕರು, ಮಾಲಕರ ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.

ಸಂಸ್ಥೆಯ ಮಾಲಕರು ಎಲ್ಲರನ್ನೂ ಸ್ವಾಗತಿಸಿ ಬರಮಾಡಿಕೊಂಡರು. ಶ್ರೀಮತಿ ಸ್ಮಿತಾ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.