ಸುಳ್ಯ ತಾಲೂಕು ಭಜನಾ ಪರಿಷತ್ ವತಿಯಿಂದ ಭಜನಾ ಕಮ್ಮಟ ಮತ್ತು ಭಜನೋತ್ಸವದ ಪೂರ್ವ ಭಾವಿ ಸಭೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪ್ರವರ್ತಿತ ತಾಲೂಕು ಭಜನಾ ಪರಿಷತ್ ವತಿಯಿಂದ ಕ್ಷೇತ್ರದಲ್ಲಿ ನಡೆಯಲಿರುವ ಭಜನಾ ಕಮ್ಮಟದಲ್ಲಿ ಭಾಗವಹಿಸುವ ಕುರಿತು ಹಾಗೂ ತಾಲೂಕು ಮಟ್ಟದ ಭಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಪೂರ್ವ ಭಾವಿ ಸಭೆಯು ಸುಳ್ಯ ಯೋಜನಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆ.31 ರಂದು ನಡೆಯಿತು.

ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ ರವರು ಅಧ್ಯಕ್ಷತೆ ವಹಿಸಿದ್ದರು.

ಧರ್ಮಸ್ಥಳದಲ್ಲಿ ಪ್ರತೀ ವರ್ಷ ಹಮ್ಮಿಕೊಳ್ಳುವ ಒಂದು ವಾರದ ಭಜನಾ ಕಮ್ಮಟದಲ್ಲಿ ಭಜನಾ ತಂಡದ ಸದಸ್ಯರು ಭಾಗವಹಿಸುವ ಕುರಿತು ಚರ್ಚಿಸಲಾಯಿತು.
ಕಮ್ಮಟದಲ್ಲಿ ಭಾಗವಹಿಸುವ ಸದಸ್ಯರು ಹೆಸರುನೋಂದಾಯಿಸಬೇಕು. ಸೆ.11 ರಂದು ಸದಸ್ಯರ ಆಯ್ಕೆ ಪ್ರಕ್ರಿಯೆಯು ಸುಳ್ಯದಲ್ಲಿ ನಡೆಯಲಿರುವುದು.
ತಾಲೂಕು ಭಜನಾ ಪರಿಷತ್ ವತಿಯಿಂದ ಭಜಕರ ಸಂಘಟನೆಗಾಗಿ ಹಮ್ಮಿಕೊಳ್ಳುವ ತಾಲೂಕು ಮಟ್ಟದ ಭಜನೋತ್ಸವ 2023 ರ ಕಾರ್ಯಕ್ರಮದ ಆಯೋಜನೆಯ ಕುರಿತು ವಿಚಾರಪ್ರಸ್ತಾಪಿಸಲಾಯಿತು. ಈಬಾರಿದೊಡ್ಡತೋಟ ವಲಯದಲ್ಲಿ ಭಜನೋತ್ಸವ ನಡೆಸುವುದೆಂದು ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ವೇದಿಕೆಯಲ್ಲಿ ಯೋಜನಾಧಿಕಾರಿ ನಾಗೇಶ್ ಪಿ, ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು ಉಪಸ್ಥಿತರಿದ್ದರು.
ಯೋಜನೆಯ ವಲಯವಾರು ಮೇಲ್ವಿಚಾರಕರು ಹಾಗೂ ವಲಯ ಭಜನಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.
ಸುಳ್ಯ ವಲಯ ಮೇಲ್ವಿಚಾರಕಿ ಪ್ರಿಯಾ .ಬಿ ಸ್ವಾಗತಿಸಿದರು. ಮೇಲ್ವಿಚಾರಕ ಕೃಷ್ಣಪ್ಪ ವಂದಿಸಿದರು.