ಅರಂತೋಡು-ತೊಡಿಕಾನ ಸೊಸೈಟಿ : ಮಹಾಸಭೆಯ ಆಹ್ವಾನ ಪತ್ರಿಕೆ ಕ್ಯೂ.ಆರ್. ಕೋಡ್ ಮೂಲಕ ಬಿಡುಗಡೆ

0

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 104 ನೇ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಸಂಘದ ಎಲ್ಲಾ ಸದಸ್ಯರಿಗೆ ತಲುಪಿಸುವ ಸಲುವಾಗಿ ಕ್ಯೂ.ಆರ್. ಕೋಡ್ ಮೂಲಕ ಆ.31 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ಬಿಡುಗಡೆ ಮಾಡಲಾಯಿತು.


ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಮಹಾಸಭೆಯ ಕ್ಯೂ.ಆರ್. ಕೋಡ್ ಅನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗು ಸಂಘದ ಪರಿಣತ ನಿರ್ದೇಶಕರು ಕೇಶವ ಅಡ್ತಲೆಯವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ನಿಧೀಶ್ ಅರಂತೋಡು, ಗಣೇಶ್ ಕರಿಂಬಿ, ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್, ಲೆಕ್ಕಿಗ ಸೀತಾರಾಮ ಯು. ರವರು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.


ಈ ಕ್ಯೂ.ಆರ್. ಕೋಡ್ ಅತ್ಯಂತ ಕಡಿಮೆ ಖರ್ಚಿನಲ್ಲಿ ತಯಾರಿಸಿದ್ದು ಸುಲಭವಾಗಿ ಹೆಚ್ಚು ಸದಸ್ಯರನ್ನು ತಲುಪುವ, ಸದಸ್ಯರು ಕುಳಿತಲ್ಲೇ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಓದಬಹುದಾದ ಹಾಗು ಸದಸ್ಯರು ಸಂಘದ ವ್ಯವಸ್ಥಾಪನೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬಹುದಾದ ವ್ಯವಸ್ಥೆಯಾಗಿರುತ್ತದೆ.