ಎಂ.ಬಿ.ದೇವಕಿ ಶ್ರದ್ದಾಂಜಲಿ ಸಭೆ

0

ಸುಳ್ಯದ ಮಾಜಿ ಮಂಡಲ ಪ್ರಧಾನ ಹಾಗೂ ಜವುಳಿ ಉದ್ಯಮಿ ದಿ. ಎಂ. ಬಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಎಂ.ಬಿ.ದೇವಕಿಯವರ ಶ್ರದ್ದಾಂಜಲಿ ಸಭೆಯು ಆ. ೨೮ರಂದು ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಮೋಂಟಡ್ಕ ಕುಟುಂಬದ ಹಿರಿಯರು ಹಾಗೂ ದಿ.ಎಂ.ಬಾಲಕೃಷ್ಣ ಗೌಡರ ಸಹೋದರ ಎಂ.ಪುಟ್ಟಣ್ಣ ಗೌಡ ಬೊಳುಬೈಲುರವರು ಎಂ.ಬಿ.ದೇವಕಿಯವರ ಭಾವಚಿತ್ರದ ಎದುರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ ಎಂ.ಬಿ.ದೇವಕಿಯವರ ಜೀವನಗಾಥೆಯ ಕುರಿತ ದೃಶ್ಯಾವಳಿಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಬಳಿಕ ಸೇರಿದ್ದ ಸಾವಿರಾರು ಮಂದಿ ಕುಟುಂಬಿಕರು ಮತ್ತು ಹಿತೈಷಿ ಮಿತ್ರರು ದೇವಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಿರಿಯ ಪುತ್ರ ಎಂ.ಬಿ.ಸದಾಶಿವ ಅವರು ಸ್ವಾಗತಿಸಿ, ವಂದಿಸಿದರು.

ಹಿರಿಯ ಪುತ್ರ ಎಂ.ಬಿ.ಜಯರಾಮ್, ಪುತ್ರಿ ಶ್ರೀಮತಿ ಸವಿತಾ ಮತ್ತು ಮೃತರ ಮೊಮ್ಮಕ್ಕಳು, ಸೊಸೆಯಂದಿರು ಮತ್ತು ಬಂಧುಗಳು ಉಪಸ್ಥಿತರಿದ್ದರು.