ಇಸ್ರೋ ವಿಜ್ಞಾನಿ ಉಬರಡ್ಕದ ವೇಣುಗೋಪಾಲ ಭಟ್‌ರಿಗೆ ಸುದ್ದಿ ಸಂಸ್ಥೆಯ ಗೌರವಾರ್ಪಣೆ

0

ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಚಂದ್ರಯಾನ – 3 ಉಪಗ್ರಹದ ಯಶಸ್ಸಿನಲ್ಲಿ ಪಾಲುದಾರರಾದ ಇಸ್ರೋ ವಿಜ್ಞಾನಿ ಉಬರಡ್ಕದ ವೇಣುಗೋಪಾಲ್ ಭಟ್‌ರವರು ಸುದ್ದಿ ಚಾನೆಲ್ ವಿಶೇಷ ಸಂದರ್ಶನಕ್ಕೆ ಸುದ್ದಿ ಕಚೇರಿಗೆ ಆಗಮಿಸಿದ್ದ ವೇಳೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್‌ಕೆರೆ ಸ್ವಾಗತಿಸಿದರು.

ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರರಾದ ಹರೀಶ್ ಬಂಟ್ವಾಳ್‌ರವರು ವೇಣುಗೋಪಾಲ್ ದಂಪತಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಸುದ್ದಿ ಬಳಗದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.