ಹಿಂದೂ ಧರ್ಮವನ್ನು‌ ಅವಮಾನಿಸಿದರೆಂಬ ಆರೋಪ

0

ಉದಯನಿಧಿ‌ ಸ್ಟಾಲಿನ್ ವಿರುದ್ದ ಹಿಂದೂ‌ ಜಾಗರಣ ವೇದಿಕೆ ದೂರು

ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಕ್ಕೆ ಹೋಲಿಸಿ, ಅದನ್ನು ನಾಶ ಮಾಡುವಂತೆ ಬಹಿರಂಗ ಬೆದರಿಕೆ ಹಾಕಿದ ತಮಿಳುನಾಡು ಮುಖ್ಯಮಂತ್ರಿಯ ಮಗ ಮತ್ತು ಸಚಿವನಾದ ಉದಯನಿಧಿ ಸ್ಟಾಲಿನ್ ವಿರುದ್ಧ ಹಿಂದೂ‌ ಜಾಗರಣಾ ವೇದಿಕೆ ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ಮಹೇಶ್ ಉಗ್ರಾಣಿಮನೆ, ಸುಳ್ಯ ತಾಲೂಕು ಸಹ ಸಂಯೋಜಕ್ ಶರತ್ ಅಡ್ಯಡ್ಕ, ಹಿಂದು ಯುವ ವಾಹಿನಿ ಸಂಯೋಜಕ್ ಅಭಿಷೇಕ್ ತೊಡಿಕಾನ , ಹಾಗೂ ತಾಲೂಕು ಪಮುಖರಾದ ಕೌಶಲ್, ವಿಜೇತ್ ಅಡ್ಯಡ್ಕ, ಕೀರ್ತನ್ ಪೆರುಮುಂಡ, ಸತೀಶ್ ಕಾಟೂರು, ಕೆ.ಪಿ.ಶೆಟ್ಟಿ, ಉಪಸ್ಥಿತರಿದ್ದರು.