ಸುಳ್ಯ ಪಯಸ್ವಿನಿ ಜೇಸಿಯ ಜೇಸಿ ಸಪ್ತಾಹ ಉದ್ಘಾಟನೆ

0

ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿ ಸಪ್ತಾಹ – 2023 ಕಾರ್ಯಕ್ರಮ ಸೆ. 8 ರಂದು ಉದ್ಘಾಟನೆಗೊಂಡಿತು.

ವಲಯ 15 ರ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ವಲಯ 15 ಸಂಯೋಜಕ ಗುರುರಾಜ್ ಅಜ್ಜಾವರ ಹಾಗೂ ಪಯಸ್ವಿನಿ ಘಟಕದ ಸ್ಥಾಪಕಾಧ್ಯಕ್ಷ ಧನಂಜಯ ಮದುವೆಗದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಪ್ತಾಹದ ಮೊದಲನೇ ಕಾರ್ಯಕ್ರಮವಾಗಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅರೋಗ್ಯ ಮಾಹಿತಿ ಮತ್ತು ತಪಾಸಣೆ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಆಯುರ್ವೇದಿಕ್ ಕಾಲೇಜಿನ ಪ್ರೊಪೆಸರ್ ಡಾ. ವಿಜಯಲಕ್ಷ್ಮಿ ಯವರು ಭಾಗವಹಿಸಿದ್ದರು.

ಘಟಕದ ಅಧ್ಯಕ್ಷ ನವೀನ್ ಕುಮಾರ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ನಿಕಟ ಪೂರ್ವಧ್ಯಕ್ಷ ರಂಜಿತ್ ಕುಕ್ಕೆಟ್ಟಿ, ಪೂರ್ವ ವಲಯಧ್ಯಕ್ಷ ಅಶೋಕ್ ಚೂoತಾರ್, ಪೂರ್ವಧ್ಯಕ್ಷ ಭೀಮರಾವ್ ವಾಸ್ಟರ್, ಘಟಕದ ಉಪಾಧ್ಯಕ್ಷರುಗಳಾದ ಲತಾ ಸುಪ್ರೀತ್ ಮೊಂಟಡ್ಕ, ರವಿಕುಮಾರ್, ಗುರುಪ್ರಸಾದ್ ಭಾಗವಹಿಸಿದರು.ಘಟಕದ ಕಾರ್ಯದರ್ಶಿ ಸುರೇಶ್ ಕಾಮತ್ ವಂದಿಸಿದರು.