ಕಲಾವಿಕಾಸ ಕಳಂಜ ಇದರ ಆಶಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಮತ್ತು ಕಬಡ್ಡಿ ಪಂದ್ಯಾಟ

0


ಕಳಂಜ ಕಲಾ ವಿಕಾಸ ಸಂಘದ ಆಶಯದಲ್ಲಿ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ವಿಷ್ಣು ನಗರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ಉದ್ಘಾಟಿಸಿದರು.

ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾ ವಿಕಾಸದ ಅಧ್ಯಕ್ಷ ಲೋಹಿತ್ ಕಟ್ಟತ್ತಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣಬೇರಿಕೆ, ಬಾಳಿಲ ವಿದ್ಯಾಭೋದಿನಿ ಶಾಲಾ ಸಂಸ್ಕೃತ ಆಧ್ಯಾಪಕ ವೆಂಕಟೇಶ್ ಕುಮಾರ್, ಕಳಂಜ- ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಎನ್.ವಿಶ್ವನಾಥ ರೈ ಕಳಂಜ, ಕಲಾವಿಕಾಸದ ಕಾರ್ಯದರ್ಶಿ ಶಿವಪ್ರಸಾದ್ ಕಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗದೀಶ್ ಮುಂಡುಗಾರು ಸ್ವಾಗತಿಸಿ, ಗಿರಿಧರ ಕಳಂಜ ವಂದಿಸಿದರು.