ಸುಳ್ಯ : ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

0

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಮಂಜುಶ್ರೀ ಕೆದಂಬಾಡಿಯವರಿಗೆ ಸನ್ಮಾನ

ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮರವರ ಅಧ್ಯಕ್ಷತೆಯಲ್ಲಿ ಸೆ.11 ರಂದು ಸುಳ್ಯದ ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು.


ಶ್ರೀಮತಿ ಉಷಾ ಜಯರಾಮರವರು ಸ್ವಾಗತಿಸಿ,
ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕವಿತಾ ವರದಿ ಮಂಡಿಸಿದರು.


ಸಂಘದ ಆರ್ಥಿಕ ಸಲಹೆಗಾರರಾದ ಪಿ.ಸಿ.ಜಯರಾಮ, ಕಾನೂನು ಸಲಹೆಗಾರರಾದ ನ್ಯಾಯವಾದಿ ದಿನೇಶ್ ಅಂಬೆಕಲ್ಲು, ಪದನಿಮಿತ್ತ ನಿರ್ದೇಶಕರಾದ ಶ್ರೀಮತಿ ಶೈಲಜಾ ಬಿ, ಸಿ.ಡಿ.ಪಿ.ಒ ಸುಳ್ಯ ಇವರು ಮಾತನಾಡಿ ಸಂಘವು ಆರ್ಥಿಕ ವರ್ಷದಲ್ಲಿ ಲಾಭ ಗಳಿಸಿದ್ದು ಮುಂದೆಯೂ ಆರ್ಥಿಕವಾಗಿ ಸಂಘವು ಮುನ್ನಡೆಯಬೇಕು ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಹೇಳಿದರು.


ಸನ್ಮಾನ
ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ತೀರ್ಥರಾಮ ಕೆದಂಬಾಡಿ ಮತ್ತು ಸಂಘದ ನಿರ್ದೇಶಕಿ ಶ್ರೀಮತಿ ಸಂಧ್ಯಾ ದಂಪತಿ ಪುತ್ರಿ ಮಂಜುಶ್ರೀ ಕೆದಂಬಾಡಿಯವರನ್ನು ಸಂಘದ ವತಿಯಿಂದ ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಂಜುಶ್ರೀಯವರು ಮಾತನಾಡಿ ಸಂಘದ ಅಧ್ಯಕ್ಷರಿಗೆ ಹಾಗೂ ನಿರ್ದೇಶಕರು ಮತ್ತು ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲತಾಕುಮಾರಿ, ನಿರ್ದೇಶಕರಾದ ಶ್ರೀಮತಿ ನಿರ್ಮಲ ಯಂ, ಶ್ರೀಮತಿ ನಳಿನಿ ಜಿ, ಶ್ರೀಮತಿ ಸರಸ್ವತಿ ಸಿ.ಕೆ, ಶ್ರೀಮತಿ ಪ್ರೇಮಾ ಕನಕಮಜಲು, ಶ್ರೀಮತಿ ಸುಲೋಚನಾ ದೇವ,ಶ್ರೀಮತಿ ಪಾರ್ವತಿ ಐವರ್ನಾಡು, ಶ್ರೀಮತಿ ಸಂಧ್ಯಾ ಟಿ.ಕೆ, ಶ್ರೀಮತಿ ವನಜಾ ಎಸ್.ರೈ, ಶ್ರೀಮತಿ ರೇವತಿ ಪಿ, ಶ್ರೀಮತಿ ಹರ್ಷಿಣಿ ಕುಮಾರಿ, ಶ್ರೀಮತಿ ಪವಿತ ಡಿ.ಸಿ ಉಪಸ್ಥಿತರಿದ್ದರು.
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಘದ ಉಪಾಧ್ಯಕ್ಷೆ ಶ್ರೀಮತಿ ಲತಾ ಕುಮಾರಿ ವಂದಿಸಿದರು.