ಶುಭವಿವಾಹ : ಗೋಕುಲ್ ಜೆ.ಯಾದವ್-ಡಾ.ಅಭಿಜ್ಞಾ ಕೆ.ಆರ್

0

ಆ.21ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ.ರೇಣುಕಾಪ್ರಸಾದ್ ಕೆ.ವಿ ಮತ್ತು ಡಾ.ಜ್ಯೋತಿ ಆರ್.ಪ್ರಸಾದ್‌ಅವರ ಪುತ್ರಿ ಡಾ.ಅಭಿಜ್ಞಾ ಕೆ.ಆರ್ – ಗೋಕುಲ್ ಜೆ.ಯಾದವ್ ಅವರ ವಿವಾಹದ ಆರತಕ್ಷತೆ ಕಾರ್ಯಕ್ರಮವು ಸೆ.09ರಂದು ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಗೌಡ ಸಮುದಾಯಭವನದಲ್ಲಿ ನೆರವೇರಿತು. ಹಲವು ಸಾವಿರ ಮಂದಿ ಭಾಗವಹಿಸಿ ನೂತನ ವಧು ವರರನ್ನು ಹರಸಿದರಲ್ಲದೆ ಅದ್ಧೂರಿಯಾಗಿ ಏರ್ಪಡಿಸಿದ್ದ ಆತಿಥ್ಯವನ್ನು ಸವಿದರು. ಕಾರ್ಯಕ್ರಮಕ್ಕಾಗಿ ಗೌಡ ಸಮುದಾಯಭವನದ ಒಳಾಂಗಣವನ್ನು ಅರಮನೆಯ ಮಾದರಿಯಲ್ಲಿ ಅಲಂಕರಿಸಲಾಗಿತ್ತು. ಎಲ್ಲಿಯೂ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ವಾಹನ ಸಂಚಾರ ವ್ಯವಸ್ಥೆಯನ್ನು ಕೂಡಾ ರಸ್ತೆ ಬ್ಲಾಕ್ ಆಗದಂತೆ ಸುವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು.