ಜಾಲ್ಸೂರಿನಲ್ಲಿ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪನೆಗೆ ಸಹಕಾರಿ ಬಂಧುಗಳಿಂದ ಕನಕಮಜಲು ಸಹಕಾರಿ ಸಂಘಕ್ಕೆ ಮನವಿ ಸಲ್ಲಿಕೆ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಜೊತೆಯಿರುವ ಜಾಲ್ಸೂರಿಗೆ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪಿಸುವಂತೆ ಜಾಲ್ಸೂರು ಭಾಗದ ಸಹಕಾರಿ ಬಂಧುಗಳು ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸೆ.15ರಂದು ಮನವಿ ಸಲ್ಲಿಸಿದರು.

ಪ್ರಸ್ತುತ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಹೆಸರಿನಲ್ಲಿ ಕನಕಮಜಲು ಸಹಕಾರಿ ಸಂಘವು ಕಾರ್ಯಾಚರಿಸುತಿದ್ದು, ಜಾಲ್ಸೂರಿನಲ್ಲಿ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪನೆ ಮಾಡಬೇಕೆಂದು ಜಾಲ್ಸೂರು ಗ್ರಾಮದ ಸಹಕಾರಿ ಬಂಧುಗಳು ಮನವಿ ಸಲ್ಲಿಸಿದರು.

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರಿಗೆ ಜಾಲ್ಸೂರು ಗ್ರಾಮದ ಸಹಕಾರಿ ಬಂಧುಗಳಾದ ಕನಕಮಜಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳಾದ ಜಯರಾಮ ರೈ ಜಾಲ್ಸೂರು, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಸಹಕಾರಿ ಬಂಧುಗಳಾದ ಮಾದವ ಗೌಡ ಕಾಳಮನೆ, ಜಾಕೆ ಸದಾನಂದ ಗೌಡ, ಜಿ.ಆರ್. ಮೋಹನ್ ಸೋಣಂಗೇರಿ, ಹರಿಪ್ರಕಾಶ್ ಅಡ್ಕಾರು, ಭೋಜಪ್ಪ ನಾಯ್ಕ ವಿನೋಬನಗರ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ ಉಪಸ್ಥಿತರಿದ್ದು, ಮನವಿ ಸಲ್ಲಿಸಿದರು.